ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ನಗರದ ಹೊರವಲಯದ ಗುರುಪುರದಲ್ಲಿ 14 ವರ್ಷದ ಶಾಲಾ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬಂಟ್ವಾಳದ ನಿವಾಸಿ ಮುಹಮ್ಮದ್ ಮುನೀರ್,ಕೈಂಕಬದ ತಸ್ವಿನ್ ಮತ್ತು ಸಾದಿಕ್ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಪ್ರಧಾನ ಆರೋಪಿ ಮುನೀರ್ ಶಾಲೆಯ ಸಮೀಪ ನಿಂತುಕೊಂಡು ಬಾಲಕಿಗೆ ಆಮಿಷವೊಡ್ಡಿ ಸ್ನೇಹ ಬೆಳೆಸಿದ್ದಾನೆ. ವಸ್ತುಗಳನ್ನು ಗಿಫ್ಟ್ ಕೊಡುವ ಮೂಲಕ ಆಕರ್ಷಿಸಿದ್ದಾನೆ. ಕೊನೆಗೆ ಬಾಲಕಿಯಿಂದ ಮೊಬೈಲ್ ನಂಬರ್ ಪಡೆದು ಪ್ರೀತಿಯ ಬಲೆಗೆ ಬೀಳಿಸಿ, ಆಕೆಯ ಖಾಸಗಿ ಫೋಟೊ, ವೀಡಿಯೊಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ಲೈಂಗಿಕವಾಗಿ ಸಹಕರಿಸದಿದ್ದಲ್ಲಿ ಫೋಟೊ, ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಹೀಗೆ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ತಂಡವು ಗುರುಪುರ ಮತ್ತು ಕೈಕಂಬ ಪರಿಸರದಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಟಾರ್ಗೆಟ್ ಮಾಡಿ ಅವರಿಗೆ ತಿಂಡಿ-ತಿನಸು ನೀಡಿ ನಂತರ ಲೈಂಗಿಕ ಕ್ರಿಯೆಗೆ ದೌರ್ಜನ್ಯ ಮಾಡುತ್ತಿದ್ದರು ಎನ್ನಲಾಗಿದೆ.
ಅದರಲ್ಲಿ ಒಂದು ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು.ಈ ಆರೋಪಿಗಳ ಮೇಲೆ ಕೆಲವೊಂದು ಪ್ರಕರಣಗಳು ದಾಖಲಾಗಿತ್ತು ಎನ್ನಲಾಗಿದೆ.
ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶದಂತೆ ಆರೋಪಿಗಳ ಬಂಧನವಾಗಿದೆ.ಇವರ ಹಿಂದೆ ದೊಡ್ಡ ಜಾಲದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.