- Advertisement -
![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
- Advertisement -
![](https://vtvvitla.com/wp-content/uploads/2022/01/DATTA-KRIPA-1024x299.jpg)
![](https://vtvvitla.com/wp-content/uploads/2022/02/janapriya-school-673x1024.jpg)
ಬಂಟ್ವಾಳ: ಕರ್ನಾಟಕದಲ್ಲಿ ಅನಗತ್ಯವಾಗಿ ಬಾಲಬಿಚ್ಚಿದರೆ, ಶಾಂತಿಯನ್ನು ಕದಡುವ ಕೆಲಸ ಮಾಡಲು ಮುಂದಾದರೆ ಯೋಗಿಯವರ ಬುಲ್ಡೋಜರ್ ಮಾಡೆಲ್ ಮಂಗಳೂರಿಗೂ ತರಬೇಕಾಗುತ್ತದೆ. ನಮಗೆ ಏನು ಭಯವಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಂಟ್ವಾಳ ಮಂಡಲದ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ‘ನಾರಿ ಸಮ್ಮಾನ ದೇಶದ ಅಭಿಮಾನ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರ ಕಳೆದುಕೊಂಡ ಕೆಲವು ರಾಜಕೀಯ ಪಕ್ಷಗಳು ಅಪಪ್ರಚಾರದ ಮೂಲಕ ದೇಶದಲ್ಲಿ ಅಶಾಂತಿ ಹಬ್ಬಿಲು ಪ್ರಯತ್ನ ಮಾಡುತ್ತಿದ್ದು , ಇದನ್ನು ಹತ್ತಿಕ್ಕಲು ಮೋದಿಯವರ ಸರಕಾರ ಶಕ್ತವಾಗಿದೆ. ಅಧಿಕಾರ ಕಳೆದುಕೊಂಡ ರಾಜಕೀಯ ಪಕ್ಷಗಳಿಗೆ ಕೋಮುವಾದಿಯ, ಜಾತಿವಾದಿ, ಅಧಿಕಾರದ ಹುಚ್ಚು ಹಿಡಿದಿದೆ, ಕುಟುಂಬ ಗುಲಾಮಗಿರಿಯ ಭಟ್ಟಂಗಿಗಳಾಗಿದ್ದಾರೆ. ಆದರೆ ಅವರ ಹುಚ್ಚು ದೂರವಾಗಬೇಕಾದರೆ ಜನ ಇನ್ನೊಮ್ಮೆ ಸೋಲಿಸಬೇಕಾಗಿದೆ ಎಂದು ಅವರು ಹೇಳಿದರು.
![](https://vtvvitla.com/wp-content/uploads/2022/06/ITE-AD-1024x597.jpg)
![](https://vtvvitla.com/wp-content/uploads/2022/01/yashpal-1024x299.jpg)
- Advertisement -