Sunday, June 29, 2025
spot_imgspot_img
spot_imgspot_img

ಉಡುಪಿ: ಕಡಲ ಕಿನಾರೆಯಲ್ಲಿ ರಾಶಿರಾಶಿ ಬೂತಾಯಿ ಮೀನು

- Advertisement -
- Advertisement -

ಉಡುಪಿ: ಕೆಲ ದಿನಗಳ ಬಳಿಕ ಮತ್ತೊಮ್ಮೆ ಉಡುಪಿ ಜಿಲ್ಲೆಯಲ್ಲಿ ಮೀನಿನ ಭರ್ಜರಿ ಬೇಟೆ ನಡೆದಿದೆ. ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೆರೆ ಕಡಲ ಕಿನಾರೆಯಲ್ಲಿ ರಾಶಿರಾಶಿ ಬೂತಾಯಿ ಮೀನುಗಳು ಬಲೆಗೆ ಬಿದ್ದಿದೆ.

ಸ್ಥಳೀಯ ಭಾಷೆಯಲ್ಲಿ ಬೈಗೆ ಮೀನು ಎಂದು ಕರೆಯಲ್ಪಡುವ ಬೂತಾಯಿ, ಮೀನುಗಾರರು ಬೀಸಿದ ಬಲೆಗೆ ಬಿದ್ದಿದೆ. ಅಷ್ಟೇ ಅಲ್ಲದೇ ದಡಕ್ಕೂ ಯಥೇಚ್ಛವಾಗಿ ಬರುತ್ತಿವೆ. ಸ್ಥಳೀಯರು ಪಾತ್ರೆ ಪಗಡೆ ಹಿಡಿದು ಕಡಲ ಕಿನಾರೆಯತ್ತ ಬರುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯೂ ಈ ರೀತಿ ಮೀನುಗಳ ರಾಶಿ ಕಂಡುಬಂದಿದ್ದು, ಮೀನುಗಾರರ ಖುಷಿಗೆ ಪಾರವೇ ಇಲ್ಲದಂತಾಗಿತ್ತು.

- Advertisement -

Related news

error: Content is protected !!