Sunday, June 29, 2025
spot_imgspot_img
spot_imgspot_img

ಉಡುಪಿ : ರಸ್ತೆ ಬದಿ ಶವ ಎಸೆದು ಪರಾರಿ ; ಇಬ್ಬರು ಕಾರ್ಮಿಕರ ಬಂಧನ

- Advertisement -
- Advertisement -

ಉಡುಪಿ: ಅಮಾನವೀಯ ಕೃತ್ಯದಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಸಹ ಕಾರ್ಮಿಕನ ಶವವನ್ನು ರಸ್ತೆ ಬದಿ ಎಸೆದು ಪರಾರಿಯಾಗಿರುವ ಘಟನೆ ಕೆಮ್ಮಣ್ಣು ಗ್ರಾಮ ಪಂಚಾಯಿತಿ ಬಳಿ ನಡೆದಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯಲ್ಲಿ ಕಲ್ಲಂಗಡಿ ಮಾರುವ ವ್ಯಾಪಾರಿಗಳು ತಮ್ಮ ಸಂಗಡಿಗರೊಂದಿಗೆ ಟೆಂಪೋದಲ್ಲಿ ತೆರಳುತ್ತಿದ್ದಾಗ 45 ವರ್ಷದ ಕಾರ್ಮಿಕ ಹನುಮಂತ ಮಾರ್ಗ ಮಧ್ಯೆಯೇ ಅನಾರೋಗ್ಯದಿಂದ ಮೃತಪಟ್ಟಿರುವ ಸಾಧ್ಯತೆಯಿದೆ.

ಸಾವನ್ನಪ್ಪಿದಕ್ಕೆ ದಾರಿ ಮಧ್ಯೆಯೇ ಮೃತದೇಹ ಬಿಟ್ಟು ವ್ಯಾಪಾರಿಗಳು ಹೋಗಿದ್ದಾರೆ. ಹನುಮಂತ ವಿಪರೀತವಾಗಿ ಕುಡಿದಿದ್ದ ಹಾಗಾಗಿ ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗದೆ ರಸ್ತೆ ಬದಿಯಲ್ಲಿ ಮಲಗಿಸಿದೆವು ಎಂದು ಜೊತೆಗಿದ್ದವರು ಪೊಲೀಸರ ಬಳಿ ಹೇಳಿದ್ದಾರೆ. ಆದರೆ ಇದೊಂದು ಅನುಮಾನಾಸ್ಪದ ಸಾವಾಗಿದ್ದು, ಮಲ್ಪೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!