Sunday, June 29, 2025
spot_imgspot_img
spot_imgspot_img

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ನೂತನ ಪದಾಧಿಕಾರಿಗಳ ಆಯ್ಕೆ..!

- Advertisement -
- Advertisement -

SSF ಮಾಣಿ ಸೆಕ್ಟರ್ ಇದರ ಮಹಾಸಭೆಯು ಫೆ.13 ಆದಿತ್ಯವಾರ ಸಂಜೆ 7-30ಕ್ಕೆ ತಾಜುಲ್ ಉಲಮಾ ಸುನ್ನಿ ಸೆಂಟರ್ ಪಾಟ್ರಕೋಡಿಯಲ್ಲಿ SSF ಮಾಣಿ ಸೆಕ್ಟರ್ ಅಧ್ಯಕ್ಷರಾದ ಸೈಯ್ಯಿದ್ ಸಾಬಿತ್ ಮುಈನಿರವರ ಅಧ್ಯಕ್ಷತೆಯಲ್ಲಿ ಜರುಗಿತ್ತು. SSF ಪುತ್ತೂರು ಡಿವಿಷನ್ ಇದರ ಅಧ್ಯಕ್ಷರಾದ ಹಾಫಿಲ್ ತೌಸೀಫ್ ಅಸ್ಅದಿ ಉದ್ಘಾಟಿಸಿದರು.

ಮಹಾಸಭೆ ವೀಕ್ಷಕರಾಗಿ ಆಗಮಿಸಿದ ಸಲಾಂ ಹನೀಫಿ ತರಗತಿ ಮಂಡಿಸಿದರು.ನಂತರ ನಡೆದ ನೂತನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿದ್ದೀಕ್ ಪೆರ್ನೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ ಖಲಂದರ್ ಶಾಫಿ ಪಾಟ್ರಕೋಡಿ, ಕೋಶಾಧಿಕಾರಿಯಾಗಿ ನೌಫಲ್ ಪೇರಮೊಗರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ನುಉಮಾನ್ ಸತ್ತಿಕಲ್ಲು, ಮೀಡಿಯಾ ಕಾರ್ಯದರ್ಶಿಯಾಗಿ ಸಿನಾನ್ ಗಡಿಯಾರ್ , ದವಾ ಸ್ವಾದಿಖ್ ಮುಈನಿ ಗಡಿಯಾರ್, ರೈಂಬೂ ಕಾರ್ಯದರ್ಶಿಯಾಗಿ ಕೆ.ಪಿ ಸಾಬಿತ್, ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಮುಸ್ತಫ ಬುಡೋಳಿ.

ಕಲ್ಚರ್ ಕಾರ್ಯದರ್ಶಿಯಾಗಿ ಸಲಾಹುದ್ದೀನ್ ಕೆಎಸ್, ವಿಝ್ಡಾಮ್ ಕಾರ್ಯದರ್ಶಿ ಯಾಗಿ ಖುಬೈಬ್ ಜೌಹರಿ ಸೂರ್ಯ, ಕ್ಯೂ ಡಿ ಕಾರ್ಯದರ್ಶಿಯಾಗಿ ಸೈಯದ್ ಸಾಬಿತ್ ಮುಈನಿ ಪಾಟ್ರಕೋಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಹಾಫಿಲ್ ತೌಸೀಫ್ ಅಸ್ಅದಿ ಕೆಮ್ಮಾಣ್,ಅನ್ಸಾರ್ ಸತ್ತಿಕಲ್ಲು, ಅಝೀಝ್ ಸತ್ತಿಕಲ್ಲು, ಇಫ್ತಿಯಾಝ್ ಪೆರ್ನೆ, ಮುಕ್ತಾರ್ ಸಹದಿ, ಇಸ್ಮಾಯಿಲ್ ಹನೀಫಿ, ನೌಶಾದ್ ಹನೀಫಿ,ಉಸೈದ್ ಮುಸ್ಲಿಯಾರ್,ಹಂಝಾ ಸತ್ತಿಕಲ್ಲು, ಸೈಫುಲ್ಲಾ ಪೇರಮೊಗರ್ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ ಸಿನಾನ್ ಸಖಾಫಿ, ಸೆಕ್ಟರ್ ,SYS ನಾಯಕರಾದ ಯೂಸುಫ್ ಸೈದ್ ನೇರಳಕಟ್ಟೆ, ಕಾಸಿಮ್ ಕೆ.ಪಿ ಅಝೀಝ್ ಬಿಎಂಕೆ, ಯವರು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು, ಕಾರ್ಯಕ್ರಮದಲ್ಲಿ 10 ಶಾಖೆಗಳ ಕೌನ್ಸಿಲರ್ ಹಾಗೂ SYS ನ ಹಲವು ಕಾರ್ಯಕರ್ತರು ಹಾಗೂ ನಾಯಕರು ಉಪಸ್ಥಿತರಿದ್ದರು. ನೌಫಲ್ ಪೇರಮೊಗರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕೆ.ಪಿ ಖಲಂದರ್ ಶಾಫಿ ಪಾಟ್ರಕೋಡಿ ಅಭಿನಂದಿಸಿದರು.

- Advertisement -

Related news

error: Content is protected !!