- Advertisement -
- Advertisement -


ಏಪ್ರಿಲ್ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಬರಲಿದ್ದು, ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಸರಕಾರ ಸಜ್ಜಾಗುತ್ತಿದೆ.

ಪಂಚರಾಜ್ಯ ಫಲಿತಾಂಶ ನಂತರ ನಮೋ ಬರುತ್ತಿದ್ದು, ಹೀಗಾಗಿ ಪಕ್ಷ ಸಂಘಟನೆಗೆ ಈ ಭೇಟಿ ಬಳಸಿಕೊಳ್ಳಲು ತಂತ್ರಗಾರಿಕೆ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದ್ದು, 2023ರ ಚುನಾವಣೆಗೆ ಈಗಿನಿಂದಲೇ ಬ್ಲೂ ಪ್ರಿಂಟ್ ತಯಾರಿ ನಡೆಸಲಾಗಿದೆ. ಮೋದಿ ರಾಜ್ಯ ಭೇಟಿ ನಂತರ ಪಕ್ಷ ಸಂಘಟನೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಸಾಲು-ಸಾಲು ಸಮಾವೇಶ, ಸಮಾರಂಭಕ್ಕೆ ಪ್ಲಾನ್ ನಡೆಯುತ್ತಿದೆ. ಮೋದಿ ಭೇಟಿಗೂ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿದೆ.



- Advertisement -