Friday, June 27, 2025
spot_imgspot_img
spot_imgspot_img

ತಾಯಿ ಬುದ್ದಿವಾದ ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಬಾಲಕಿ ಆತ್ಮಹತ್ಯೆ

- Advertisement -
- Advertisement -

ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್ ಕುಮಾರ್ ಹಾಗೂ ಭವ್ಯ ದಂಪತಿಯ ಪುತ್ರಿ 15 ವರ್ಷದ ಬಾಲಕಿ ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಸರಿಯಾಗಿ ಓದದೆ, ಮೊಬೈಲ್ ಆಟವಾಡಿಕೊಂಡಿರುತ್ತಿದ್ದ ಮಗಳಿಗೆ ಆಕೆಯ ತಾಯಿ ಗುರುವಾರ ರಾತ್ರಿ ಬುದ್ಧಿವಾದ ಹೇಳಿದ್ದಾರೆ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ವಿದ್ಯಾಶ್ರೀ ಗೌರಿಬಿದನೂರು ಸಮೀಪದ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಖಾಸಗಿ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ವಿದ್ಯಾಭ್ಯಾಸ ಸರಿಯಾಗಿ ಮಾಡದೆ, ಮೊಬೈಲ್ ಆಟವಾಡಿಕೊಂಡಿರುತ್ತಿದ್ದರಿಂದ  ತಾಯಿ ಮಗಳಿಗೆ ನಿನ್ನೆ ಗುರುವಾರ ರಾತ್ರಿ ಬುದ್ದಿವಾದ ಹೇಳಿದ್ದಾರೆ. ಇದನ್ನ ಮನಸ್ಸಿಗೆ ಹಚ್ಚಿಕೊಂಡಿದ್ದ ವಿದ್ಯಾಶ್ರೀ ಮನನೊಂದು ಸಮೀಪದ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!