Saturday, June 28, 2025
spot_imgspot_img
spot_imgspot_img

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ..!? ಹೈಕಮಾಂಡ್ ಮುದ್ರೆ ಬೀಳೋದೊಂದೇ ಮಾತ್ರ ಬಾಕಿ

- Advertisement -
- Advertisement -

ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಎಲ್ಲಾ ಅಡೆತಡೆಗಳನ್ನು ಬದಿಗೊತ್ತಿ ಮೇಲು ಗೈ ಸಾಧಿಸಿದ್ದಾರೆ ಎಂಬ ಬ್ರೇಕಿಂಗ್‌ ಸುದ್ದಿ ಈಗ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ.

ಕೆಪಿಸಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ ಕೊನೆಯ ಲಿಸ್ಟ್‌ನಲ್ಲಿ ಅಶೋಕ್ ರೈಯವರ ಹೆಸರನ್ನು ಮಾತ್ರ ಸೂಚಿಸಿದೆ ಎನ್ನಲಾಗುತ್ತಿದೆ. ಹೈಕಮಾಂಡ್ ಮುದ್ರೆ ಬೀಳುವುದು ಮಾತ್ರ ಬಾಕಿ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

ರೈ ಎಜ್ಯುಕೇಶನಲ್ ಆಂಡ್ ಚಾರಿಟಬಲ್ ಟ್ರಸ್ಟ್‌ನ ದಶ ಸಂಭ್ರಮ ಕಾರ್ಯಕ್ರಮದಲ್ಲಿ ಶಕು ಅಕ್ಕ ಅವರು ಆಶೀರ್ವಾದ ನೀಡಿದರೆ ಮಾತ್ರ ನಾನು ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಹೇಳಿಕೆ ನೀಡಿದ್ದರು. ಅಶೋಕ್ ಕುಮಾರ್ ಕೋಡಿಂಬಾಡಿ ಅವರ ಹೆಸರು ಲಿಸ್ಟ್‌ನಲ್ಲಿ ಸೇರಿಕೊಂಡಿದ್ದು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಬಿಜೆಪಿ ಪಾಲಿಗೆ ಇದೊಂದು ಹೈಫೀವರ್‍ ಕಣವಾಗಲಿದೆ.

ಇನ್ನು ಇದೇ ವಿಚಾರವಾಗಿ ಕೈ ಕೂಟ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯವೂ ಇದೆ ಎನ್ನಲಾಗುತ್ತಿದೆ. ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಅವರು ಹೈಕಮಾಂಡ್ ಹೇಗೆ ಹೇಳುತ್ತೋ ಅದೆ ರೀತಿ ನಡೆದುಕೊಂಡು ಹೋಗುತ್ತೇವೆ, ಹೈಕಮಾಂಡ್‌ನ ಸಲಹೆ ಸೂಚನೆ ಪಾಲಿಸಬೇಕೆಂದು ಹೇಳಿಕೆ ಕೊಟ್ಟಿದ್ದರು.

ಇದನ್ನೆಲ್ಲಾ ಗಮನಿಸುವಾಗ ಉದ್ಯಮಿ, ಸಾಮಾಜಿಕ, ಧಾರ್ಮಿಕ ಮುಂದಾಳು ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಮಣೆ ಹಾಕುವುದು ಬಹುತೇಕ ಖಚಿತ ಎಂಬಂತಿದೆ.

- Advertisement -

Related news

error: Content is protected !!