Sunday, June 29, 2025
spot_imgspot_img
spot_imgspot_img

ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಮೂವರು ಸಾವು

- Advertisement -
- Advertisement -

ರೈಲು ಹಳಿ ದಾಟುತ್ತಿವ ಸಂದರ್ಭದಲ್ಲಿ ರೈಲಿನಡಿಗೆ ಸಿಕ್ಕಿ ಮೂವರು ಮೃತಪಟ್ಟ ದಾರುಣ ಘಟನೆ ಜಾರ್ಖಂಡ್‌ನ ಧನ್ಬಾದ್ ರೈಲ್ವೆ ವಿಭಾಗದ ನೇತಾಜಿ ಸುಭಾಸ್ ಚಂದ್ರ ಬೋಸ್ ಗೊಮೊಹ್ ರೈಲು ನಿಲ್ದಾಣದಲ್ಲಿ ನಡೆದಿದೆ. ಮನೋಜ್ ಸಾಬ್ (19), ಶಿವಚರಣ್ ಸಾಬ್ (20) ಮತ್ತು ಬಬ್ಲೂ ಕುಮಾರ್ (20) ಮೃತ ದುರ್ದೈವಿಗಳು.

ಅಸನ್ಸೋಲ್-ಗೋಮೊಹ್ ಪ್ಯಾಸೆಂಜರ್ ರೈಲಿನಿಂದ ಫ್ಲಾಟ್ಫಾರ್ಮ್ 4ರಲ್ಲಿ ಈ ಮೂವರೂ ಇಳಿದಿದ್ದು, ಪ್ಲಾಟ್ಫಾರ್ಮ್ ಸಂಖ್ಯೆ 3 ನ್ನು ತಲುಪಲೆಂದು ಹಳಿ ದಾಟುತ್ತಿದ್ದರು. ಈ ವೇಳೆ ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಆಗಮಿಸಿದ್ದು, ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರ ಕುಟುಂಬಸ್ಧರು ಬಂದು ಬಟ್ಟೆಗಳ ಆಧಾರದಲ್ಲಿ ಅವರನ್ನು ಗುರುತಿಸಿದ್ದಾರೆ. ಮೂವರ ದೇಹಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಆರ್‌ಪಿಎಫ್‌ ಇನ್ಸ್ಪೆಕ್ಟರ್ ವಿಜಯ್ ಶಂಕರ್ ಮಾಹಿತಿ ನೀಡಿದ್ದಾರೆ. ಮೃತ ದೇಹವನ್ನು ಸಂಗ್ರಹಿಸಲು ಆ ಮಾರ್ಗದಲ್ಲಿ ರೈಲು ಸಂಚಾರವನ್ನೇ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!