Saturday, June 27, 2026
spot_imgspot_img
spot_imgspot_img

ಲಾಕ್​ಡೌನ್ ಎಂದು ಮನೆಗೆ ಬಂದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಎಸ್ಕೇಪ್ ಆದ ಅಣ್ಣ..!

- Advertisement -
- Advertisement -

ಮಂಡ್ಯ: ಹಣ ಮಾಡಬೇಕು ಅಂತ ಬೆಂಗಳೂರಿಗೆ ಬಂದವ ವಾಪಸ್ ಮನೆಗೆ ಹೋಗುತ್ತಿದ್ದಂತೆ ಕೊಲೆಯಾಗಿದ್ದಾರೆ. ಚಂದನ್(22) ಕೊಲೆಯಾದ ಯುವಕ. ಈತ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದ ನಿವಾಸಿ.

ದುಡ್ಡು ಮಾಡ್ಬೇಕು ಅಂತಾ ಗಂಟು ಮೂಟೆ ಕಟ್ಕೊಂಡು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದ. ಬಾರ್ ಒಂದ್ರಲ್ಲಿ ಕೆಲಸ ಮಾಡ್ಕೊಂಡು ಫುಲ್ ಎಂಜಾಯ್ ಮಾಡ್ತಿದ್ದ. ಪ್ರತಿದಿನ ದೇಹಕ್ಕೆ ಮತ್ತೇರಿಸಿಕೊಂಡು ಮಜಾ ಮಾಡ್ತಿದ್ದ. ಮೂರು ತಿಂಗಳಿಗೊಮ್ಮೆನೋ ಅಥವಾ ಆರು ತಿಂಗಳಿಗೊಮ್ಮೆನೋ ಊರಿಗೆ ಹೋಗುತ್ತಿದ್ದ. ಒಂದೆರಡು ದಿನ ಊರಲ್ಲಿದ್ದು ವಾಪಸ್ ಬೆಂಗಳೂರಿಗೆ ಬರ್ತಿದ್ದ.

ಆದ್ರೆ, 2ನೇ ಅಲೆಯ ಹೊಡೆತದಿಂದ ಬೆಂಗಳೂರು ಲಾಕ್ಡೌನ್ ಆಗಿದ್ದೇ ತಡ, ಈ ಚಂದನ್ ಊರಿಗೆ ಹೋಗಿದ್ದ. ತಂದೆ, ತಾಯಿ ಮತ್ತು ಅಣ್ಣನ ಜೊತೆ ವಾಸವಿದ್ದ. ಆದರೆ ಸಿಲ್ಲಿ ವಿಚಾರಕ್ಕೆ ಅಣ್ಣನಾದ ಅಭಿಷೇಕ್, ಚಂದನ್ ನ ಕೊಲೆ ಮಾಡಿದ್ದಾನೆ. ಅದು ಕೂಡ ಕಲ್ಲಿನಿಂದ ಜಜ್ಜಿ ಪರಾರಿ ಆಗಿದ್ದಾನೆ.

ಎಣ್ಣೆ ಪಾರ್ಟಿಗಳ ನಡುವೆ ಕಿರಿಕ್.. ಚಂದನ್, ಅಭಿಷೇಕ್ ಇಬ್ರೂ ಎಣ್ಣೆ ಪಾರ್ಟಿಗಳೇ. ಹೀಗಾಗಿ ಅಣ್ಣ, ತಮ್ಮಂದಿರ ನಡುವೆ ಹೊಂದಾಣಿಕೆ ಇರಲಿಲ್ವಂತೆ. ಕುಡಿದ ಮತ್ತಲ್ಲಿ ಇಬ್ಬರು ಜಗಳ ಮಾಡಿಕೊಳ್ತಿದ್ರಂತೆ. ಮನೆಯಲ್ಲಿ ಇಬ್ಬರನ್ನ ಸಮಾಧಾನ ಮಾಡೋದೇ ಪೋಷಕರಿಗೆ ದೊಡ್ಡ ಕೆಲಸವಾಗಿತ್ತಂತೆ. ಹೀಗೆ ಮೊನ್ನೆಯೂ ಸಹೋದರರು ಕುಡಿದ ಮತ್ತಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮೃಗದಂತೆ ಆದ ಅಭಿಷೇಕ್, ಕಲ್ಲಿನಿಂದ ಹೊಡೆದು ತಮ್ಮನನ್ನ ಕೊಂದು ತಲೆ ಮರೆಸಿಕೊಂಡಿದ್ದಾನೆ.

ಸದ್ಯ, ಒಬ್ಬ ಮಗನನ್ನ ಕಳೆದುಕೊಂಡಿರೋ ಪೋಷಕರು, ಇನ್ನೊಬ್ಬನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇತ್ತ, ಕೆರಗೋಡು ಪೊಲೀಸರು ಪರಾರಿ ಆಗಿರೋ ಆರೋಪಿಗೆ ಬಲೆ ಬೀಸಿದ್ದು, ಕೊಲೆಗೆ ಬೇರೆ ರೀಸನ್ ಏನಾದ್ರು ಇದ್ಯಾ ಅಂತಾ ತನಿಖೆ ಮಾಡ್ತಿದ್ದಾರೆ.

- Advertisement -

Related news

error: Content is protected !!