


ಕೊಯಂಬತ್ತೂರು : ಶಾಲಾ ಶಿಕ್ಷಕನ ಲೈಂಗಿಕ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ. ಪ್ರಕರಣದ ಹಿನ್ನಲೆ ಪೊಲೀಸರು ಕಾಲೇಜು ಪ್ರಿನ್ಸಿಪಾಲ್ ಮತ್ತು ಶಿಕ್ಷಕನನ್ನು ಬಂದಿಸಿದ್ದಾರೆ.

ಬoಧಿತರನ್ನು ಕೊಯಂಬತ್ತೂರಿನ ಚಿನ್ನಯ ವಿದ್ಯಾಲಯದ ಪ್ರಿನ್ಸಿಪಾಲ್ ಮೀರಾ ಜಾಕ್ಸನ್ ಮತ್ತು ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಶಿಕ್ಷಕ ಮಿಥುನ್ ಚಕ್ರವರ್ತಿ ಎನ್ನಲಾಗಿದೆ. ಕಾಲೇಜಿನಲ್ಲಿ ಪ್ರಥಮ ಪಿಯು ಕಲಿಯುತ್ತಿದ್ದ ವಿದ್ಯಾರ್ಥಿನಿಗೆ ಶಿಕ್ಷಕ ಮಿಥುನ್ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿನಿ ಪ್ರಾಂಶುಪಾಲರಿಗೂ ದೂರು ನೀಡಿದ್ದಳು. ಆದರೆ ಪ್ರಿನ್ಸಿಪಾಲ್ ಕ್ರಮ ತೆಗೆದುಕೋಳ್ಳದೇ ಬುದ್ಧಿಮಾತು ಹೇಳಿ ಕಳುಹಿಸಿದ್ದರು. 17 ವರ್ಷದ ವಿದ್ಯಾರ್ಥಿನಿ ನ.11ರಂದು ತನ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಸಾವನ್ನಪ್ಪಿದ್ದಳು.

ವಿಷಯ ಬೆಳಕಿಗೆ ಬರುತ್ತಲೇ ಪೊಲೀಸರು ಮರುದಿನ ಆರೋಪಿ ಶಿಕ್ಷಕನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪ್ರಾಂಶುಪಾಲರನ್ನೂ ಬಂಧಿಸಬೇಕು ಎಂದು ಆಕೆಯ ಹೆತ್ತವರು ಮತ್ತು ಸಂಬAಧಿಕರು ಆಗ್ರಹಿಸಿದ್ದರು. ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ್ದು ತಮಿಳುನಾಡಿನಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಈ ನಡುವೆ, ಪ್ರಾಂಶುಪಾಲೆ ಮೀರಾ ಜಾಕ್ಸನ್ ನಾಪತ್ತೆಯಾಗಿದ್ದು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ವಿದ್ಯಾರ್ಥಿನಿಯ ಶವವನ್ನು ಕಾಲೇಜು ಮುಂದಿಟ್ಟು ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಶಾಲಾಡಳಿತದ ಮುಖ್ಯಸ್ಥರನ್ನೂ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಡೆತ್ ನೋಟ್ ನಲ್ಲಿ ಇನ್ನಿಬ್ಬರ ಹೆಸರುಗಳಿದ್ದು, ಅವರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಆರೋಪಿ ಮತ್ತು ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದು ಜೈಲಿಗೆ ಹಾಕಿದ್ದಾರೆ. ಮೃತ ವಿದ್ಯಾರ್ಥಿನಿಯ ಗೆಳತಿ ಹೇಳುವ ಪ್ರಕಾರ, ಶಿಕ್ಷಕ ಮಿಥುನ್ ವಿದ್ಯಾರ್ಥಿನಿಯ ಜೊತೆಗೆ ಗೆಳೆತನದ ಸಂಬoಧ ಹೊಂದಿದ್ದ ಆಕೆಯ ಮೊಬೈಲಿಗೆ ಮೆಸೇಜ್ ಮಾಡುತ್ತಿದ್ದು ಆತನ ನಡತೆ ಏನೋ ಅಸಹಜ ಇತ್ತು. ಈ ಬಗ್ಗೆ ಕಾಲೇಜು ಪ್ರಿನ್ಸಿಪಾಲ್ ಮತ್ತು ಶಿಕ್ಷಕನ ಪತ್ನಿಗೂ ಗೊತ್ತಿತ್ತು. ಆದರೆ ಅವರೇನೂ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಇದಲ್ಲದೆ, ಶಿಕ್ಷಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ನೇರವಾಗಿ ಪ್ರಿನ್ಸಿಪಾಲ್ ಬಳಿ ದೂರು ಹೇಳಿಕೊಂಡಿದ್ದಳು. ಆದರೆ ಪ್ರಿನ್ಸಿಪಾಲ್, ಈ ಬಗ್ಗೆ ಹೆತ್ತವರಿಗೆ ಹೇಳದಂತೆ ಸೂಚನೆ ನೀಡಿದ್ದಲ್ಲದೆ, ಕಾಲೇಜು ಸ್ಟಾಫ್ ರೂಮಿಗೆ ಕರೆದು ಕೌನ್ಸೆಲಿಂಗ್ ಮಾಡಿದ್ದರು. ಈ ವೇಳೆ ಆಕೆ ಪ್ರಶ್ನೆ ಮಾಡಿದ್ದಕ್ಕೆ ಬೆತ್ತದಿಂದ ಏಟನ್ನೂ ಕೊಟ್ಟಿದ್ದರು ಎಂದು ದೂರಲಾಗಿದೆ. ಈ ನಡುವೆ, ವಿದ್ಯಾರ್ಥಿನಿ ಮತ್ತು ಶಿಕ್ಷಕನ ನಡುವಿನ ವಾಟ್ಸಪ್ ಚಾಟ್ ಮತ್ತು ಆಡಿಯೋ ಸಂಭಾಷಣೆ ಲೀಕ್ ಆಗಿ ವೈರಲ್ ಆಗಿತ್ತು.


