- Advertisement -
- Advertisement -
ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ
ಇದನ್ನೂ ಓದಿ: ಮಂಗಳೂರು: ಐಸಿಸ್ ಜೊತೆ ನಂಟು..! ಮಾಜಿ ಕೈ ಶಾಸಕನ ಮಗನ ನಿವಾಸಕ್ಕೆ ಎನ್ಐಎ ದಾಳಿ
ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಸಿಎಂ ಬೊಮ್ಮಾಯಿಯವರು ಸಂಪುಟದ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ. ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದರು. 29 ಜನರ ಹೆಸರು ಸಚಿವರ ಅಧಿಕೃತ ಪಟ್ಟಿಯಲ್ಲಿದೆ. 8 ಲಿಂಗಾಯತ ಸಮುದಾಯದವರಿಗೆ, 7 ಒಬಿಸಿ ಸಮುದಾಯದವರಿಗೆ, 7 ಒಕ್ಕಲಿಗ ಸಮುದಾಯದವರಿಗೆ, 3 ಎಸ್ಸಿ, 1 ಎಸ್ಟಿ ಹಾಗೂ ಒಬ್ಬ ಮಹಿಳೆಯರು ಇಂದಿನ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ಘೋಷಣೆ ಮಾಡಿದರು.
- Advertisement -