Sunday, June 29, 2025
spot_imgspot_img
spot_imgspot_img

ಆಟೋ ಚಾಲಕನ ಬರ್ಬರ ಹತ್ಯೆ

- Advertisement -
- Advertisement -

ಭದ್ರಾವತಿ: ಶಿವಮೊಗ್ಗದ ಆಟೋ ಚಾಲಕನನ್ನು ಭದ್ರಾವತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ‌. ರೂಪೇಶ್ ಕುಮಾರ್ (45) ಎಂಬಾತ ಹತ್ಯೆಯಾದ ವ್ಯಕ್ತಿಯಾಗಿದ್ದು, ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ರೂಪೇಶ್ ಕುಮಾರ್ ಮೂಲತಃ ಹೊಳೆಹೊನ್ನೂರಿನವರು. ಶಿವಮೊಗ್ಗದಲ್ಲಿ ನೆಲೆಸಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಪಿಎಂಸಿ ಬಳಿ ಘಟನೆ ನಡೆದಿದ್ದು, ದೊಣ್ಣೆಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಇದೆ.

ಮೃತದೇಹದ ಪಕ್ಕದಲ್ಲಿ ರಕ್ತಸಿಕ್ತವಾದ ದೊಣ್ಣೆ ಪತ್ತೆಯಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

vtv vitla
- Advertisement -

Related news

error: Content is protected !!