ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ತಾಯಿಯಾಗಿ ಅಭಿನಯಿಸುತ್ತ ಜನರ ಮನಸ್ಸೇಳೆದ ಅಂಜಲಿಯವರು. ಕನಕಪುರದಲ್ಲಿ ಹುಟ್ಟಿ ಬೆಳೆದ ಇವರು ನಟನೆರಂಗಕ್ಕೆ ಬಂದಿದ್ದು ಒಂದು ಕಾಕತಾಳಿಯೇ ಎನ್ನಬಹುದು. ಕಂಕಣ ಭಾಗ್ಯದ ಮೂಲಕ ತಂಗಿಯ ಪಾತ್ರದಲ್ಲಿ ಚಂದನವನಕ್ಕೆ ಕಾಲಿಟ್ಟರು. ಕಾಶೀನಾಥ್ ಅವರಿಂದ ಇವರು ಪೂರ್ಣ ಪ್ರಮಾಣದ ನಾಯಕಿಯಾಗಿ ಅನಂತನ ಆವಂತರದಲ್ಲಿ ನಟಿಸಿದರು. ಅದಾದನಂತರ ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್, ಅನಂತನಾಗ್, ಜಗ್ಗೇಶ್,ಅವರ ಜೊತೆ ಅಭಿನಯಿಸಿದ್ದು ಅವರ ಪುಣ್ಯ ಹಾಗೂ ಅವರ ಅದೃಷ್ಟವೇ ಸರಿ ಎನ್ನುತ್ತಾರೆ ಅಂಜಲಿಯವರು. ತರ್ಲೆ ನನ್ ಮಗ, ಉಂಡು ಹೋದ ಕೊಂಡು ಹೋದ,ನೀನು ನಕ್ಕರೆ ಹಾಲು ಸಕ್ಕರೆ,ಅವನೇ ನನ್ನ ಗಂಡ,ಹೆಂಡ್ತಿಘೆಳ್ಬೇಡಿ,ಗಣೇಶನ ಮದುವೆ, ತುಂಬಿದ ಮನೆ, ಅಪ್ಪ ನಂಜಪ್ಪ ಮಗ ಗುಣಜಪ್ಪ ಮುಂತಾದ ಚಲನಚಿತ್ರದಲ್ಲಿ ನಟಿಸಿ ಜನರ ಮನಸ್ಸೇಳೆದಿದ್ದಾರೆ.
1998 ರಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಅವರ ಪತಿ ಸುಧಾಕರ್ ಅವರೊಂದಿಗೆ ದುಬೈ ಅಲ್ಲಿ ದಾಂಪತ್ಯ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇಪ್ಪತ್ತ್ತೊಂದು ವರ್ಷದ ನಂತರ ಕಿರುತೆರೆಗೆ ಮತ್ತೆ ನೇತ್ರಾವತಿ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಅದಾದ ನಂತರ ರಾಮಾಚಾರಿಯ ತಾಯಿಯಾಗಿ ರಾಮಾಚಾರಿ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಪ್ಪತ್ತೊಂದು ವರ್ಷದ ನಂತರ ” ಬೇರ ” ಚಿತ್ರದ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟಿದ್ದಾರೆ.ವಿನಯ್ ಬಳಂಜ ಅವರ ನಿರ್ಮಾಣದ ಬೇರ ಚಿತ್ರದಲ್ಲಿ ಮಂಜುನಾಥ್ ಹೆಗ್ಡೆ ಯವರ ಪತ್ನಿಯಾಗಿ ಅಭಿನಯಿಸಿದ್ದಾರೆ. ಶಾರದಾ ಎನ್ನುವ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ.ಇಷ್ಟು ವರ್ಷದ ನಂತರ ನಟಿಸಿದ ಮೊದಲನೇ ಚಿತ್ರ ಎನ್ನುವ ಹೆಮ್ಮೆ ಇದೆ . ವಿಭಿನ್ನವಾದ ಕತೆಯೊಂದಿಗೆ ದಿವಾಕರ್ ದಾಸ್ ನೆರ್ಲಾಜೆ ಯವರು ಅತ್ಯದ್ಭುತ ಪ್ರಯತ್ನವನ್ನು ಮಾಡಿದ್ದಾರೆ. ಈ ತಂಡದ ಜೊತೆ ಮತ್ತೆ ಅವಕಾಶ ಸಿಕ್ಕರೆ ಖಂಡಿತ ಅಭಿನಯಿಸುತ್ತೇನೆ ಎಂದಿದ್ದಾರೆ ನಟಿ ಅಂಜಲಿಯವರು.