- Advertisement -
- Advertisement -
ಉಡುಪಿ : ಆ್ಯಂಬುಲೆನ್ಸ್ ಒಂದು ಬೆಂಕಿ ಹತ್ತಿಕೊಂಡು ಉರಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಶಾರ್ಟ್ ಸರ್ಕ್ಯೂ ಟ್ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ನಗರದ ಕಲ್ಸಂಕ ಬಳಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸ್ ಮತ್ತು ಸಾರ್ವಜನಿಕ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯವನ್ನು ಅಗ್ನಿಶಾಮಕ ದಳ ಮಾಡಿದ್ದು ತುರ್ತು ಬೆಂಕಿ ಶಮನ ಮಾಡಿದ್ದಾರೆ.
ಸಮೀಪದಲ್ಲೇ ಎಚ್ ಪಿ ಗ್ಯಾಸ್ ಟ್ಯಾಂಕರ್ ಇದ್ದುದನ್ನು ಗಮನಿಸಿದ ಪೊಲೀಸರು ತಕ್ಷಣವೇ ಟ್ಯಾಂಕರ್ ತೆರವುಗೊಳಿಸಿ ಭಾರಿ ದುರಂತವನ್ನು ತಪ್ಪಿಸಿದ್ದಾರೆ. ಜೊತೆಗೆ ಉಡುಪಿಯಲ್ಲಿ ಸುರಿದ ಭಾರಿ ಮಳೆಯೂ ಬೆಂಕಿ ಆರಿಸಲು ಸಹಾಯವಾಗಿದೆ.
- Advertisement -