Saturday, April 20, 2024
spot_imgspot_img
spot_imgspot_img

ಎ.11 ರಂದು ವಿಟ್ಲ ಅರಮನೆಯಲ್ಲಿ ನಡೆಯಲಿರುವ ತ್ರಿಕಾಲ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -G L Acharya panikkar
- Advertisement -
vtv vitla

ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಮನೆತನದ ಅರಮನೆಯಲ್ಲಿ ಶ್ರೀದೇವಿಯ ಪ್ರೀತ್ಯರ್ಥವಾಗಿ ಸಮಸ್ತ ಸಮಾಜದ ಒಳಿತಿಗಾಗಿ ಅರಮನೆಯ ಮಠದಲ್ಲಿ ಶ್ರೀದೇವಿಗೆ ತ್ರಿಕಾಲ ಪೂಜೆಯು ಎ.11 ರಂದು ವಿಟ್ಲ ಅರಮನೆಯಲ್ಲಿ ನಡೆಯಲಿದೆ. ಆ ಪ್ರಯುಕ್ತ ಆಮಂತ್ರಣ ಪತ್ರಿಕೆಯ ಬಿಡುಗಡೆಯು ವಿಟ್ಲದ ಅರಸರ ದಿವ್ಯ ಹಸ್ತದಿಂದ ಸರ್ವರ ಉಪಸ್ಥಿತಿಯಲ್ಲಿ ಅರಮನೆಯಲ್ಲಿ ನೆರವೇರಿತು.

This image has an empty alt attribute; its file name is image-69-1024x724.png

ಎ.11 ರಂದು ಪ್ರಾತಃಕಾಲ ರಾಜಪುರೋಹಿತರಾದ ವೇ.ಮೂ.ಶ್ರೀವತ್ಸ ಕೆದಿಲಾಯರಿಂದ ದೀಪಾರಾಧನೆ, ಗಂಟೆ 8 ಕ್ಕೆ ಮಹಾಮಂಗಳಾರತಿ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು (ವಾದ್ಯಗೋಷ್ಟಿ-ಭಜನೆ) ನಡೆಯಲಿದೆ. ಮದ್ಯಾಹ್ನ ಮಹಾಮಂಗಳಾರತಿ ಬಳಿಕ ಪ್ರಸಾದ ಭೋಜನ ನಡೆಯಲಿದೆ. ಸಾಯಂಕಾಲ ವಿಟ್ಲ ಸೀಮೆಯ ಚರಿತ್ರೆಯ ವಿಶೇಷ ಅಧ್ಯಯನ ನಡೆಸಿದ ಇತಿಹಾಸ ತಜ್ಞರಾದ ಡಾ| ಪುಂಡಿಕಾಯಿ ಗಣಪಯ್ಯ ಭಟ್, ಮೂಡಬಿದ್ರೆ ಇವರಿಂದ ಉಪನ್ಯಾಸ ನಡೆಯಲಿದೆ. ರಾತ್ರಿ 7.30 ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ಭೋಜನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!