- Advertisement -
- Advertisement -
ಕಡಬ: ತಾಲೂಕಿನ ನೂಜಿಬಾಳ್ತಿಲ ಶಾಲೆಯಲ್ಲಿನ ಅಡುಗೆ ರೂಮಿನಲ್ಲಿ ಗ್ಯಾಸ್ ಉರಿಸುವಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿರುವ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಕೂಡಲೇ ಸ್ಥಳದಲ್ಲಿದ್ದವರು ಸಮಯಪ್ರಜ್ಞೆಯಿಂದಾಗಿ ಬಾರೀ ದುರಂತ ತಪ್ಪಿದೆ.
ಅಡುಗೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಕಿಟಕಿ ಮೂಲಕ ಬೆಂಕಿ ನಂದಿಸುವ ಉಪಕರಣದ ಸಹಾಯದಿಂದ ಬೆಂಕಿ ನಂದಿಸಿ, ಹೆಚ್ಚಿನ ಅಪಾಯ ಸಂಭವಿಸದಂತೆ ಮಾಡಿದರು.
ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು. ಶಿಕ್ಷಕರು, ಎಸ್.ಡಿ.ಎಂ.ಸಿ. ಸಮಿತಿಯವರು, ಪೋಷಕರು, ನೂಜಿಬಾಳ್ತಿಲ ಗ್ರಾ.ಪಂ.ನವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
- Advertisement -