Saturday, June 28, 2025
spot_imgspot_img
spot_imgspot_img

ಕಡಬ: ಮಂಗಳೂರು ಮೂಲದ ಯುವಕನನ್ನು ಹನಿಟ್ರ್ಯಾಪ್‌ ಜಾಲಕ್ಕೆ ಗುರಿಯಾಗಿಸಿದ ಕಡಬದ ಮುಸ್ಲಿಂ ಯುವಕರ ತಂಡ

- Advertisement -
- Advertisement -

ಕಡಬ: ಮಂಗಳೂರು ಮೂಲದ ಯುವಕನೋರ್ವ ಕಡಬದ ಯುವಕರ ತಂಡದಿಂದ ಹನಿಟ್ರ್ಯಾಪ್‌ ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು , ಪರಾರಿಯಾಗಲು ಯತ್ನಿಸಿದ ಓರ್ವನನ್ನು ಕಡಬ ಪೋಲಿಸರು ಸಿನಿಮೀಯ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿದೆ.

ಹುಡುಗಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಕಡಬ ಮರ್ದಾಳದಮುಸ್ಲಿಂ ಯುವಕರ ತಂಡವೊಂದು ಮಂಗಳೂರಿನ ಯುವಕನನ್ನು ಬುಟ್ಟಿಗೆ ಬೀಳಿಸಿ ಮಂಗಳವಾರ ತಡರಾತ್ರಿ ಕಡಬಕ್ಕೆ ಕರೆಸಿದ್ದಾರೆ ಎನ್ನಲಾಗಿದೆ. ಬಳಿಕ ಕೆರ್ಮಾಯಿ ಕೋರಿಯಾರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿದ್ದಲ್ಲದೇ, ಹಣ ನೀಡದಿದ್ದರೆ ಹುಡುಗಿಯ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿದು ಬಿಡುವುದಾಗಿ ಬೆದರಿಸಿ ಹಣ ತರುವಂತೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಹಲ್ಲೆಗೊಳಗಾದ ಯುವಕ ತನ್ನ ಸ್ನೇಹಿತನ ಮೂಲಕ ಕಡಬ ಪೋಲಿಸರಿಗೆ ನೀಡಿದ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ಪೋಲಿಸರು, ಸಂತ್ರಸ್ಥನ ಮೂಲಕವೇ ಹಣ ನೀಡುವ ಆಮಿಷವೊಡ್ಡಿ ಆರೋಪಿಗಳನ್ನು ಕಡಬಕ್ಕೆ ಕರೆಸಿದ್ದಾರೆ. ಕಡಬದಲ್ಲಿ ಆರೋಪಿಗಳನ್ನು ಸುತ್ತುವರಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪೋಲಿಸರ ಇರುವಿಕೆಯ ಮಾಹಿತಿ ತಿಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು , ಮರ್ಧಾಳದ ಯುವಕನೋರ್ವ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಘಟನೆಯ ಬಗ್ಗೆ ಪೋಲಿಸರಿಂದ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಪ್ರ ಕರಣದ ಸಂಪೂರ್ಣಮಾಹಿತಿ ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ.

- Advertisement -

Related news

error: Content is protected !!