Monday, May 6, 2024
spot_imgspot_img
spot_imgspot_img

ಕಡಬ: ಶ್ರೀ ರಾಮ ಸೇನೆಯ ಮುಖಂಡರ ಮೇಲೆ ತಲವಾರು ದಾಳಿ!

- Advertisement -G L Acharya panikkar
- Advertisement -

ಕಡಬ: ಶ್ರೀ ರಾಮ ಸೇನೆಯ ಮುಖಂಡರೋರ್ವರ ಮೇಲೆ ನಾಲ್ಕು ಬೈಕ್ ನಲ್ಲಿ ಬಂದ ಅವರ ತೀರ ಪರಿಚಿತರ ತಂಡವೊಂದು ಹಲ್ಲೆಗೆ ಮುಂದಾಗಿ ತಲ್ವಾರಿನಿಂದ ದಾಳಿಗೆ ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಶ್ರೀ ರಾಮ ಸೇನೆ ಮುಖಂಡ ಗೋಪಾಲ ನಾಯ್ಕರವರ ಮೇಲಿನ ಮನೆ ಅವರು ತನ್ನ ಸಂಬಂಧಿಕರಿಗೆ ಸ್ಕೂಟಿಯಲ್ಲಿ ಕಡಬದಿಂದ ಔಷಧ ಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೋಡಿಂಬಾಳದ ಅಜ್ಜಿಕಟ್ಟೆ ಸಮೀಪ ದಾಳಿ ಆಗಿರುವುದಾಗಿ ಅವರು ಆರೋಪಿಸಿದ್ದಾರೆ.

ಆ ಬಳಿಕ ಅವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇತ್ತೀಚೆಗೆ ಕಡಬದಲ್ಲಿ ಕಬಡ್ಡಿ ಪಂದ್ಯಾಟದ ವೇಳೆ ನಡೆದ ಹೊಡೆದಾಟವೇ ಈ ದಾಳಿಗೆ ಕಾರಣವಾಗಿದೆ ಎನ್ನಲಾಗಿದೆ.

ಅನಿಲ್ ಮತ್ತು ಆತನ ಸಹಚರರು ಕೊಲೆಗೆ ಯತ್ನಿಸಿರುವುದಾಗಿ ಗೋಪಾಲ ನಾಯ್ಕರವರು ಆರೋಪಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.

- Advertisement -

Related news

error: Content is protected !!