Thursday, May 16, 2024
spot_imgspot_img
spot_imgspot_img

ಕರುಳ ಬಳ್ಳಿಯನ್ನೇ ಹೊಸಕಿ ಹಾಕೋಕೆ ಮುಂದಾದ ಮಹಾತಾಯಿ ಅಂದರ್‌..! ಹತ್ಯೆಗೆ ಸ್ಕೆಚ್ ಹಾಕಿದವಳ ಕಾರಣವೇನು ಗೊತ್ತಾ..?

- Advertisement -G L Acharya panikkar
- Advertisement -

ಹೆತ್ತಾಕೆಗೆ ಆ ಪುಟ್ಟ ಕಂದಮ್ಮ ಬೇಡದಾಗಿತ್ತು. 40 ದಿನದ ಹಸುಗೂಸನ್ನು ಹೆತ್ತ ತಾಯಿ ಕೊಲ್ಲಲು ಮುಂದಾಗಿ ನಾಪತ್ತೆಯಾದ ಹೈಡ್ರಾಮ ನಡೆಸಿ ಕಂಬಿ ಎಣಿಸಿದ ಘಟನೆ ನಡೆದಿದೆ. ಮಗು ಹೆಣ್ಣು ಮತ್ತು ಮೆದುಳು ಬೆಳವಣಿಗೆಯಾಗಿಲ್ಲ ಎಂಬ ಕಾರಣಕ್ಕೆ ಮಗುವನ್ನು ಕೊಲ್ಲಲು ಯತ್ನಿಸಿದ್ದಾಳೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್​) ಆಸ್ಪತ್ರೆಯಲ್ಲಿ ಕಳೆದ ಸೋಮವಾರ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಮತ್ತು ಸಲ್ಮಾ ದಂಪತಿಯ 40 ದಿನದ ಮಗು ಕಾಣೆಯಾಗಿತ್ತು. ಸಲ್ಮಾ ಚಿಕಿತ್ಸೆಗೆಂದು ಮಗುವನ್ನು ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಏಕಾಏಕಿ ಕಣ್ಮರೆಯಾಗಿತ್ತು. ಈ ಬಗ್ಗೆ ಸಿಬ್ಬಂದಿಗಳು ಮತ್ತು ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಮಗು ಪತ್ತೆಯಾಗಿರಲಿಲ್ಲ.

ಆದರೆ ಇದ್ದಕ್ಕಿದ್ದಂತೆಯೇ ಮಗು ಬೆಳಗ್ಗೆ ದಿಢೀರ್​ ಪತ್ತೆಯಾಗಿದೆ. ಚರಂಡಿ ಕಟ್ಟೆ ಮೇಲೆ ಯಾರೋ ಇಟ್ಟು ಹೋಗಿದ್ದಾರೆ. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಮಂಜುಳಾ ಎನ್ನುವವರು ಮಗು ಅಳುವ ಶಬ್ದ ನೋಡಿ ಹತ್ತಿರ ಹೋದಾಗ ಮಗು ಇದ್ದುದನ್ನು ನೋಡಿ, ಆಸ್ಪತ್ರೆಗೆ ಮಾಹಿತಿ ಮುಟ್ಟಿಸಿದ್ದಾರೆ.

ಮಗು ಕಾಣೆಯಾಗಿದ್ದರೂ ತಲೆ ಕೆಡಿಸಿಕೊಳ್ಳದ ತಾಯಿ..!
ಮಗು ಕಾಣೆಯಾಗಿದ್ದರೂ ತಲೆ ಕೆಡಿಸಿಕೊಳ್ಳದೇ ಹೋಗಿದ್ದ ತಾಯಿ ಸಲ್ಮಾ ಮೇಲೆ ಅನುಮಾನ ಹೆಚ್ಚಾಗಿತ್ತು. ಮಾರನೆಯ ದಿನ ಮಗು ಸಿಕ್ಕ ಸುದ್ದಿ ಅವರಿಗೆ ತಿಳಿಸಿದಾಗಲೂ ಎಷ್ಟೋ ಗಂಟೆ ಬಿಟ್ಟು ಬಂದು ಮಗು ಪಡೆದಿದ್ದು ಕೂಡ ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ನಂತರ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕೊನೆಗೂ ತಿಳಿದ ಸತ್ಯ ತಾಯಿಯೇ ಮಗುವನ್ನು ಕೊಲ್ಲಲು ಪ್ರಯತ್ನ ಪಟ್ಟಿದ್ದಳು ಎಂಬುದು. ಕಾಂಪೌಂಡ್​ನಿಂದ ಮಗುವನ್ನು ಎಸೆದು ಸಾಯಿಸಲು ಪ್ರಯತ್ನಿಸಿದ್ದಳು ಎನ್ನುವ ಅಂಶ ತಿಳಿಯುತ್ತಲೇ ಆಕೆಯನ್ನು ಅರೆಸ್ಟ್​ ಮಾಡಿದ್ದಾರೆ. ಕೋರ್ಟ್​ ಮುಂದೆ ಆಕೆಯನ್ನು ಹಾಜರುಪಡಿಸಲಾಗಿದ್ದು, ಸದ್ಯ 14 ದಿನಗಳವರಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಾಣಾಪಾಯದಿಂದ ಪಾರಾಗಿರುವ 40 ದಿನದ ಮಗುವಿಗೆ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ತಾನಾಗಿಯೇ ಮಗವನ್ನು ಎಸೆದು, ಕಳ್ಳತನದ ಕಥೆ ಕಟ್ಟಿದ್ದ ತಾಯಿ ಕೊನೆಗೂ ಕಂಬಿ ಎಣಿಸುತ್ತಿದ್ದಾಳೆ. ಇದರ ಹಿಂದೆ ಬೇರೆಯವರ ಕೈವಾಡ ಇರೋ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!