Thursday, April 25, 2024
spot_imgspot_img
spot_imgspot_img

ಸರ್ಕಾರಿ ಶಾಲೆಯ ಕೊಠಡಿಯೊಳಗೆ ಗೋರಿ ನಿರ್ಮಾಣ; ಹಿಂದೂ ಸಂಘಟನೆಗಳಿಂದ ವಿರೋಧದ ನಂತರ ತೆರವು

- Advertisement -G L Acharya panikkar
- Advertisement -

ಕಲಬುರಗಿ: ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಮುಸ್ಲಿಂಮರ ಮಜರ್ (ಗೋರಿ) ನಿರ್ಮಾಣ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಆರೋಪಿಸಿದೆ.

ಶ್ರೀರಾಮ‌ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಈ ಬಗ್ಗೆ ಮಾತನಾಡಿ,ಸರಕಾರಿ ಶಾಲೆಯಲ್ಲಿ ಗೋರಿ ನಿರ್ಮಾಣ ಮಾಡಿದ್ದಾರೆ, ತಕ್ಷಣ ತೆರವು ಮಾಡಬೇಕು ಇಲ್ಲವಾದಲ್ಲಿ ಚಲೋ ಬಂದರವಾಡ ನಡೆಸುವುದಾಗಿ ಹೇಳಿದ್ದರು.

ಆಲಾಲ್ ಸಾಹೇಬ್ ನೈಯಿಲೆ ಯಹೈದರಿ ದರ್ಗಾದ ಮಜರ್ ಮೊದಲು ಗ್ರಾಮದ ಸಂತೆ ಜಾಗದಲ್ಲಿತ್ತು. ಹೀಗಾಗಿ ಗ್ರಾಮ ಪಂಚಾಯಿತಿಯವರು ಸಂತೆ ಜಾಗದಲ್ಲಿದ್ದ ದೇವಸ್ಥಾನ ಮತ್ತು ಮಜರ್​ ತೆರವುಗೊಳಿಸಿದ್ದರು. ನಂತರ ಗ್ರಾಮದ ಕೆಲ ಹಿಂದು, ಮುಸ್ಲಿಂರು ಸೇರಿಕೊಂಡು ಮಜರ್ ಶಾಲೆಯೊಳಗೆ ಇಟ್ಟಿದ್ದರು ಎಂದು ವರದಿಯಾಗಿದೆ.

ಈಗ ಶ್ರೀರಾಮಸೇನೆ ಕೂಡಲೇ ಮಜರ್ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ. ಇದರಿಂದ ಅಲ್ಲಿನ‌ ಸ್ಥಳೀಯ ಹಿಂದೂ‌ ಮುಸ್ಲಿಂ ಯುವಕರು ಸೇರಿಕೊಂಡು ಗೋರಿಯನ್ನು ತೆರವುಗೊಳಿಸಿದ್ದಾರೆ.

- Advertisement -

Related news

error: Content is protected !!