- Advertisement -
- Advertisement -
ಬಂಟ್ವಾಳ: ಹಿಂದು ಜಾಗರಣ ವೇದಿಕೆ ಅಮ್ಟಾಡಿ ವಲಯದ ವತಿಯಿಂದ ವಲಯದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಮ್ಟಾಡಿ ಪಂಚಾಯತ್ ವ್ಯಾಪ್ತಿಯ ಲೋರೆಟ್ಟೂ ಎಂಬಲ್ಲಿ ಎಮ್ಮೆ ಮಾಂಸ ವ್ಯಾಪಾರ ಲೈಸೆನ್ಸ್ ಅರ್ಜಿ ಬಂದ ಹಿನ್ನೆಲೆಯಲ್ಲಿ ಆ ಅರ್ಜಿಗೆ ಆಕ್ಷೇಪಣೆ ಮತ್ತು ಇದರ ಹಿಂದೆ ಇರುವ ಷಡ್ಯಂತ್ರದ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಮತ್ತು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರಿಗೆ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿಂಜಾವೇ ಪೂರ್ಣ ವಾದಿ ಕಾರ್ಯಕರ್ತರಾದ ಪ್ರಶಾಂತ ಕೆಂಪುಗುಡ್ಡೆ, ಮತ್ತು ಶರಣ್ ಕಾಮಾಜೆ, ಹರೀಶ್ ತಲೆಂಬಿಲ, ರವಿ ಕೆಂಪು ಗುಡ್ಡೆ, ಹರೀಶ್ ಅಜೇಕಲ, ತಿಲಕ್ ನಲ್ಕೆಮಾರ್, ಸುಧೀಂದ್ರ ದೇವಿನಗರ, ಸಚಿನ್ ದೇವಿನಗರ, ಪ್ರಜ್ವಲ್ ದೇವಿ ನಗರ, ಸಂದೇಶ್ ದುರ್ಗಾ ನಗರ, ಸಂತೋಷ್ ದುರ್ಗಾ ನಗರ, ಉಪಸ್ಥಿತರಿದ್ದರು.
- Advertisement -