Saturday, June 28, 2025
spot_imgspot_img
spot_imgspot_img

ಕಾರಣಿಕ ಕ್ಷೇತ್ರ ಕೇಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಹುಂಡಿ ಎಗರಿಸಿದ ಖದೀಮರು…!

- Advertisement -
- Advertisement -

ವಿಟ್ಲ: ಕಾರಣಿಕ ಕ್ಷೇತ್ರಗಳಲ್ಲೊಂದಾದ ವೀರಕಂಬ ಗ್ರಾಮದ ಕೇಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಯಾರೋ ಖದೀಮರು ಎಗರಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕೇಲಿಂಜ ಕ್ಷೇತ್ರಕ್ಕೆ ಬಹಳ ಪುರಾತನ ಇತಿಹಾಸವಿದ್ದು ಇಲ್ಲಿ ವರ್ಷಂಪ್ರತಿ ನಡೆಯುವ ಮೆಚ್ಚಿ ಜಾತ್ರೆಗೆ ಅಪಾರ ಮಹಿಮೆ ಇದೆ. ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಇಲ್ಲಿನ ಜಾತ್ರೆಯಲ್ಲಿ ಪಾಲ್ಗೊಲ್ಲುತ್ತಾರೆ.

ಬೆಂಜೆಂತಿಮಾರ್ ಗುತ್ತು ಮೂಲ ಭಂಡಾರದ ಮನೆಯಿಂದ ಜಾತ್ರೆಯ ಹಿಂದಿನ ದಿನ ಉಲ್ಲಾಳ್ತಿಯ ಭಂಡಾರ ಬರುವಾಗ ಪ್ರತಿ ಮನೆಯವರು ತಮ್ಮ ಮನೆಗಳಿಗೆ ಬಾಗಿಲು ಹಾಕದೆ ಉಲ್ಲಾಳ್ತಿಯ ಭಂಡಾರ ಹೋಗುವ ಧರ್ಶನ ಪಡೆಯುತ್ತಾರೆ ಎಂಬ ಪ್ರತೀತಿ ಇದೆ.

ಪ್ರತಿ ಸಂಕ್ರಮಣದಂದು ಕೇಲಿಂಜ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ಮಾರ್ಗದಿಂದ ಹಾದು ಹೋಗುವ ಅನೇಕ ಭಕ್ತರು ಕ್ಷೇತ್ರದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಕಾಣಿಕೆ ಹಾಕಿ ಹೋಗುತ್ತಾರೆ. ನಿನ್ನೆ ರಾತ್ರಿ ಯಾರೋ ಖದೀಮರು ಕಾಣಿಕೆ ಹುಂಡಿಯನ್ನು ಎಗರಿಸಿರುತ್ತಾರೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಿದೆ

- Advertisement -

Related news

error: Content is protected !!