Monday, June 30, 2025
spot_imgspot_img
spot_imgspot_img

ಕಾರು ಸೈಕಲ್‌ಗೆ ಡಿಕ್ಕಿ ಹೊಡೆದು ಬಂಟ್ವಾಳ ಮೂಲದ ಯುವಕ ಸಾವು

- Advertisement -
- Advertisement -

ಸೈಕಲ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಬಂಟ್ವಾಳ ಕಾಮಾಜೆ ನಿವಾಸಿ ಶಿವಪ್ರಸಾದ್‌ (33) ಮೃತಪಟ್ಟ ಯುವಕ.

ಬೆಂಗಳೂರಿನ ಏರ್‌ಪೋರ್ಸ್‌ನಲ್ಲಿ ಅವರು ಎಸಿ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಕ್ವಾರ್ಟಸ್‌ನಿಂದ 250 ಮೀಟರ್ ದೂರವಿರುವ ಕಚೇರಿಗೆ ಶುಕ್ರವಾರ ಸೈಕಲ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಹಿಳೆ ಚಲಾಯಿಸಿಕೊಂಡು ಬಂದ ಕಾರೊಂದು ಹಿಂದಿನಿಂದ ಶಿವಪ್ರಸಾದ್ ಅವರ ಸೈಕಲ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕಜ್ಕೆ ಶಿವಪ್ರಸಾದ್ ಡಿವೈಡರ್‌ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶಿವಪ್ರಸಾದ್ ಅವರಿಗೆ ಕಳೆದ ಐದು ವರ್ಷಗಳ ಹಿಂದಷ್ಟೇ ವಿವಾಹವಾಗಿತ್ತು. ಮೊದಲು ರಾಯಿಯಲ್ಲಿದ್ದ ಕುಟುಂಬ ಹತ್ತು ವರ್ಷಗಳಿಂದ ಕಾಮಾಜೆಯಲ್ಲಿ ನೆಲೆಸಿತ್ತು. ಸುಮಾರು ಐದು ವರ್ಷಗಳ ಹಿಂದೆ ಅವರಿಗೆ ಏರ್‌ಫೋರ್ಸ್‌ನಲ್ಲಿ ಕೆಲಸ ದೊರಕಿತ್ತು. ಮೃತ ಶರೀರವನ್ನು ಶನಿವಾರ ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

- Advertisement -

Related news

error: Content is protected !!