- Advertisement -
- Advertisement -



ಕಾಸರಗೋಡು : ಕಳ್ಳಾರಿನಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ತೃಶ್ಯೂರಿನ ವಸತಿ ಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಾಜಾಪುರ ಕಳ್ಳಾರಿನ ಮುಹಮ್ಮದ್ ಶರೀಫ್(40) ಮತ್ತು ಸಿಂಧು(36) ಮೃತಪಟ್ಟವರು. ಗುರುವಾಯೂರು ಸಮೀಪದ ವಸತಿ ಗೃಹದಲ್ಲಿ ಮೃತ ದೇಹಗಳು ಸಂಜೆ ಪತ್ತೆಯಾಗಿದೆ. ಬುಧವಾರ ರಾತ್ರಿ ಇಬ್ಬರು ಒಂದು ದಿನಕ್ಕೆ ರೂಂ ಬುಕ್ ಮಾಡಿದ್ದರು.
ಗುರುವಾರ ಸಂಜೆ ತನಕ ರೂಂನ ಬಾಗಿಲು ತೆರೆಯದಿದ್ದುದರಿಂದ ಸಿಬ್ಬಂದಿಗಳು ಗಮನಿಸಿದಾಗ ಇಬ್ಬರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಮಹಜರು ನಡೆಸಿದರು. ಜನವರಿ 7 ರಿಂದ ಸಿಂಧು ನಾಪತ್ತೆಯಾಗಿರುವುದಾಗಿ ಮನೆಯವರು ರಾಜಾಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
- Advertisement -