Sunday, May 19, 2024
spot_imgspot_img
spot_imgspot_img

ಕೆದಿಲ ನಿವಾಸಿ ಪುರುಷೋತ್ತಮ ಬೆಂಗಳೂರಿನಲ್ಲಿ ಕೊರೊನಾಗೆ ಬಲಿ!

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಮಾನು ದಿ.ತುಕ್ರಪ್ಪ ಗೌಡರ ಪುತ್ರ ಪುರುಷೋತ್ತಮ(42) ರವರು ಮೇ.27ರಂದು ಕೋವಿಡ್ ನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರು ಬೆಂಗಳೂರಿನ ಗೋಲ್ಡನ್ ಸಿನ್ಸ್ ಟೆಕ್ಸ್ ಟೈಲ್ಸ್ ನ ಉದ್ಯೋಗಿಯಾಗಿದ್ದು, ಬೆಂಗಳೂರಿನ ಎಂಟನೇ ಮೈಲ್ ನ ಭೂಮಿಕಾ ಲೇ ಔಟ್ ನಲ್ಲಿ ಪತ್ನಿ ಮಗುವಿನೊಂದಿಗೆ ವಾಸವಾಗಿದ್ದರು.

ಅನಾರೋಗ್ಯದ‌ ಹಿನ್ನೆಲೆಯಲ್ಲಿ ಮೇ.25ರಂದು ಅವರನ್ನು ಬೆಂಗಳೂರಿನ ಬಿಡದಿಯಲ್ಲಿರುವ ಬಿಜಿಎಸ್ ಜೀವ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂಧಿಸದೆ  ಮೇ.27ರಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತದೇಹವನ್ನು ಕುದುಮಾನ್ ನ ಮನೆಗೆ ತಂದು ಅಂತ್ಯಕ್ರೀಯೆ ನೆರವೇರಿಸಲಾಯಿತು. ಮೃತರು ಪತ್ನಿ ಅನುರಾಧ, ಒಂದು ವರ್ಷದ ಹೆಣ್ಣು ಮಗು ತಶ್ವಿಕಾ, ತಾಯಿ ವೆಂಕಮ್ಮ, ಸಹೋದರ ನಿತ್ಯಾನಂದ, ಸಹೋದರಿಯರಾದ ಕಮಲ, ಲಕ್ಷ್ಮಿ, ಕುಸುಮಾವತಿ, ಮೋಹಿನಿಯವರನ್ನು ಅಗಲಿದ್ದಾರೆ.

driving
- Advertisement -

Related news

error: Content is protected !!