- Advertisement -
- Advertisement -
ವಿಜಯಪುರ: ಗುಡಿಸಲಿನಲ್ಲಿದ್ದ ಗ್ಯಾಸ್ ಆಕಸ್ಮಿಕವಾಗಿ ಸೋರಿಕೆಯಾಗಿ ನಾಲ್ಕು ಗುಡಿಸಲು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇ ಬಿಹಾಳ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಬಳಿ ನಡೆದಿದೆ.
ನಾಗೇಶ ರೆಡ್ಡಿ ಅವರಿಗೆ ಸೇರಿದ ಗುಡಿಸಲು ಸೇರಿದಂತೆ ಮೂರು ಗುಡಿಸಲು ಬೆಂಕಿಗಾಹುತಿ ಆಗಿವೆ. ಅಲ್ಲದೇ, ಮನೆಯಲ್ಲಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ವಸ್ತುಗಳು ಹಾನಿಯಾಗಿವೆ. ಘಟನೆ ಪರಿಣಾಮ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ಮುದ್ದೇ ಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
- Advertisement -