- Advertisement -
- Advertisement -
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಬರಿಕಾಲಿನಲ್ಲಿ ಚಿತ್ರದುರ್ಗದ ಕೋಟೆಯ ಗೋಡೆ ಏರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದಾ ಹೊಸ ಹೊಸ ಸಾಹಸಕ್ಕೆ ಕೈ ಹಾಕುವ ಐಪಿಎಸ್ ಅಧಿಕಾರಿ ಶಶಿಕುಮಾರ್ ಈ ಬಾರಿ ತಮ್ಮ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾದ ಚಿತ್ರದುರ್ಗದ ಕೋಟೆಯ ಗೋಡೆಯನ್ನು ಏರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಇವರು ಹಾಡು, ಕುಣಿತ ಮನೋರಂಜನೆಯ ಆಯ್ದ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿಯೂ ಕಲ್ಲಿನ ಕೋಟೆ ಹತ್ತಿದ್ದನ್ನು ಅಲ್ಲೇ ಇದ್ದವರು ವೀಡಿಯೋ ಮಾಡಿದ್ದಾರೆ. ತಮ್ಮ ಸಾಹಸದ ವೀಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಖ್ಯಾತ ಕೋಟೆ ಹತ್ತುವ ಸಾಹಸಿಗ ಕೋತಿರಾಜ್ ಸಲಹೆಯನ್ನು ಪಡೆದು ಎತ್ತರದ ಕೋಟೆ ಏರಿದ್ದಾರೆ.
- Advertisement -