Sunday, June 29, 2025
spot_imgspot_img
spot_imgspot_img

ಚೆಸ್ ಟೂರ್ನಮೆಂಟ್‌ನಲ್ಲಿ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲೆ ಪ್ರಥಮ ಸ್ಥಾನ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ AICS ಚೆಸ್ ಫೆಡರೇಷನ್‌‌‌‌‌ ವತಿಯಿಂದ ಸಂತ ಮೇರಿ ಶಾಲೆ ಕನ್ನರ್ಪಾಡಿಯಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯಾಟದಲ್ಲಿ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲೆಯು ಪ್ರಥಮ ಸ್ಥಾನ ಹಾಗೂ ವೈಯಕ್ತಿಕ ಚೆಸ್ ಪಂದ್ಯಾಟದಲ್ಲಿ ದ್ಯಾನ್‌ಕೃಷ್ಣ ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈ ಪಂದ್ಯಾಟದಲ್ಲಿ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲೆಯ ವಿದ್ಯಾರ್ಥಿಗಳಾದ ಧೀನ್‌ರಾಮ್ ಶೆಟ್ಟಿ, ಅದ್ವಿತಿ ಶೆಟ್ಟಿ, ದ್ಯಾನ್‌ಕೃಷ್ಣ ಶೆಟ್ಟಿ, ರಿಯಾನ್ ಸೋನಾಲಿ ಪಿಂಟೋ, ವೈಭವ್ ಪೈ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಅಂತೆಯೇ ವೈಯಕ್ತಿಕ ಚೆಸ್ ಪಂದ್ಯಾಟದಲ್ಲಿ ದ್ಯಾನ್‌ಕೃಷ್ಣ ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಎಲ್ಲಾಅ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!