ಬಡಕುಟುಂಗಳಿಗೆ “ಲಯನ್ಸ್ ಜ್ಯೋತಿ” ಉಚಿತ ವಿದ್ಯುತ್ ಸೌಕರ್ಯ ವಿತರಣೆ
ಕಡಂಬು ಶಾಲೆಗೆ ಕಂಪ್ಯೂಟರ್ ಹಾಗೂ ಬೋರ್ಡ್ ವಿತರಣೆ
ಲಯನ್ಸ್ ಜಿಲ್ಲೆ 317 ಡಿ ಇದರ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ (ಪಿಎಂಜಿಎಫ್) ಯವರ ಅಧಿಕೃತ ಬೇಟಿಯ ಸಲುವಾಗಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಗೆ ಭೇಟಿ ನೀಡಿದರು. ಬೆಳಗ್ಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಜೈನ ಬಸದಿ, ಜೋಗಿ ಮಠಕ್ಕೆ ಭೇಟಿ ನೀಡಿದರು.
ನಂತರ ವಿಟ್ಲ ಕೊಡಂಗಾಯಿ ನಿವಾಸಿ ಬಡಕುಟುಂಬದ ಮನೆಯೊಂದಕ್ಕೆ ಲಯನ್ಸ್ ಜ್ಯೋತಿ ಉಚಿತ ವಿದ್ಯುತ್ ಸೌಕರ್ಯ ವಿತರಣೆ ಮಾಡಿದರು. ನಂತರ ಕಡಂಬು ಶಾಲೆಗೆ ಕಂಪ್ಯೂಟರ್ ಹಾಗೂ ಬೋರ್ಡ್ ವಿತರಿಸಿದರು. ಬಳಿಕ ವಿಟ್ಲ ಐ.ಬಿ ಸಭಾಭವನಕ್ಕೆ ಭೇಟಿಕೊಟ್ಟು ಮಾಧ್ಯಮ ಗೋಷ್ಠಿ ನಡೆಸಿದರು. ಸಂಜೆ ವಿಟ್ಲ ನೀರಕಣಿಯ ಜಿ. ಎಲ್ ಅಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಮತ್ತು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಸಂಜಿತ್ ಶೆಟ್ಟಿಯವರ ಪತ್ನಿ ಪ್ರಗತಿ ಶೆಟ್ಟಿ, ಲಯನ್ಸ್ನ ಪದಾಧಿಕಾರಿಗಳಾದ ವಸಂತ ಶೆಟ್ಟಿ ಹಾಗೂ ಸದಾನಂದ ಗೌಡ ಸೇರಾಜೆ ಮೋಹನ ಕಟ್ಟೆ ಜಯರಾಮ್ ಬಲ್ಲಾಳ್ ಓಯಿ ಕೃಷ್ಣ ಧರ್ಣಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.