ಜೆಸಿಐ ಬಿಸಿ ರೋಡ್ ಪವರ್ ಸ್ಟಾರ್ ಘಟಕದ ವತಿಯಿಂದ ಆಟಿಡೊಂಜಿ ದಿನ ಮತ್ತು ಸೆಲ್ಯೂಟ್ ಟು ಸೈಲೆಂಟ್ ವರ್ಕರ್ಸ್ ಕಾರ್ಯಕ್ರಮವು ಪಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಯು ರವರು ಆಟಿಯ ವಿಶೇಷತೆಗಳ ಬಗ್ಗೆ ಮತ್ತು ಸೈಲೆಂಟ್ ವರ್ಕರ್ ಗಳ ಸನ್ಮಾನಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ನೇತ್ರಾವತಿ ಬಿಸಿ ರೋಡ್ ಇದರ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್ ಬಂಟ್ವಾಳ ಜೆಸಿಐ ಅಧ್ಯಕ್ಷರಾದ ರೋಷನ್ ರೈ ವಿಟ್ಲ ಜೆಸಿಐ ಅಧ್ಯಕ್ಷರಾದ ಚಂದ್ರಸ್ ಕೊಪ್ಪಳ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸುಮಾರು ಏಳು ಸದ್ದಿಲ್ಲದೆ ಸಮಾಜ ಸೇವೆಯನ್ನು ನಡೆಸುತ್ತಿರುವ ಸೈಲೆಂಟ್ ವರ್ಕರ್ ಗಳನ್ನು ಸನ್ಮಾನಿಸಲಾಯಿತು.
ಶ್ರೀ ರಾಜ್ ಮ್ಯೂಸಿಕ್ ಪುತ್ತೂರು ಇವರ ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಮುಂದುವರಿದ ಆಟಿದ ಕೂಟದಲ್ಲಿ ಸಮಾರೋಪ ಸಮಾರಂಭದಲ್ಲಿ ಜೆಸಿಐ ವಲಯ ಉಪಾಧ್ಯಕ್ಷರಾದ ದೀಪಕ್ ಗಂಗುಲಿ ಮುಖ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಜೆಸಿಐ ಪವರ್ ಸ್ಟಾರ್ ಘಟಕದ ಅಧ್ಯಕ್ಷರಾದ ಸುಬ್ರಮಣ್ಯ ಕಾಡುಮಠರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು ಮಹೇಶ್ ಕುಮಾರ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿಯವರಾದ ಸುಧೀರ್ ಕುಮಾರ್ ಶೆಟ್ಟಿ ಅವರು ವಂದಿಸಿದರು ಆಟಿ ಯ ವಿಶೇಷ ತಿಂಡಿ ತಿನಸುಗಳೊಂದಿಗೆ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.