- Advertisement -
- Advertisement -


ನಾವೆಲ್ಲರು ನಿಜವಾಗಿಯೂ ಹಾವು ಕಂಡರೆ ಭಯಬೀಳುವುದು ಅಕ್ಷರ ಸಹಃ ಸತ್ಯ” ಹಾವು ಎಂದು ಜೋರಾಗಿ ಕೂಗಿದರೆ ಸಾಕು ಎದ್ದು ಬಿದ್ದು ಓಡಿ ಹೋಗುವುದನ್ನು ನಾವು ಕಾಣಬಹುದು.
ಬಾಗಲಕೋಟೆ ನಗರದ ವಿದ್ಯಾಗಿರಿಯ ಕೊಣ್ಣೂರ ಮಠದ ಹಿಂಬದಿಯ ಮನೆಯೊಂದರಲ್ಲಿ ವಿಷಕಾರಿ ನಾಗರಹಾವೊಂದು ಕಾಣಿಸಿಕೊಂಡಿದೆ. ಮನೆಯ ಗೋಡೆಗೆ ಜೋತುಹಾಕಿದ್ದ ಗಣಪತಿ ಫೋಟೋ ಪ್ರೇಮ್ ಹಿಂಭಾಗದಲ್ಲಿ ನಾಗರಹಾವು ಬುಸುಗುಟ್ಟಿದೆ. ಮನೆಯಲ್ಲಿದ್ದ ನಾಗರಹಾವು ಫೋಟೋ ಪ್ರೇಮ್ ನಲ್ಲಿ ಅಡಗಿ ಕುಳಿತುಕೊಂಡಿರುವುದು ಮನೆಯವರಿಗೆ ಗೊತ್ತಾಗಿದೆ.
ಇದನ್ನು ಕಂಡ ಮನೆಯವರು ಭಯಭೀತರಾಗಿದ್ದಾರೆ. ಕೂಡಲೇ ಮನೆಯವರು ಉರಗ ರಕ್ಷಕರಿಗೆ ತಿಳಿಸಿದರು. ತಕ್ಷಣ ಸುದ್ದಿ ತಿಳಿದ ಉರಗ ರಕ್ಷಕ ಸ್ನೇಕ್ ರಾಜು ಸ್ಥಳಕ್ಕಾಗಮಿಸಿದ್ದು. ಬಳಿಕ ನಾಗರಹಾವಿನ ರಕ್ಷಣೆ ಮಾಡಿದ್ದಾರೆ.
- Advertisement -