


ಬಂಟ್ವಾಳ: ದೈವಾರಾಧನೆ ಹಿಂದೂ ಸಮಾಜದ ಒಗ್ಗಟ್ಟಿಗೆ ಶಕ್ತಿ ತುಂಬಲಿದ್ದು, ಇಂತಹ ಆರಾಧನೆಯ ಮೂಲ ಕಟ್ಟುಪಾಡುಗಳಿಗೆ ಚ್ಯುತಿ ಬಾರದ ಬರುತ್ತಿರುವ ಕಟ್ಟೆಮಾರ್ ಶ್ರೀ ಮಂತ್ರ, ದೇವತಾ ಸಾನಿಧ್ಯ ಎಲ್ಲ ದೈವಾರಾಧನಾ ಕೇಂದ್ರಗಳಿಗೆ ಮಾದರಿಯಾಗಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಅಮೂರು ಗ್ರಾಮದ ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನ್ನಿಧ್ಯದ ವಾರ್ಷಿಕೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಹಿರಿಯರಾದ ಮೋಹನ್ ರಾಜ್ ಚೌಟ ಪುಂಚೋಳಿ, ಮಾರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಂತ್ರದೇವತಾ ಜನಸೇವಾ ಟ್ರಸ್ಟ್ ಹಾಗೂ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯದ ವತಿಯಿಂದ ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು.
https://www.youtube.com/live/gYKX9w8lltE
ಉದ್ಯಮಿ ಪಿ.ಜಗದೀಶ್ ಕುಮಾರ್, ಸ್ನೇಹ ಜಗದೀಶ್, ಪಂಚಾಯತ್ ರಾಜ್ ಎಂಜಿನಿಯರಿಂಗ್ – ಬಂಟ್ವಾಳ ಉಪಸ್ಥಿತರಿದ್ದರು. ತಾರಾನಾಥ ಸಾಲ್ಯಾನ್, ಸಕಲೇಶಪುರ ಎಪಿಎಂಸಿಯ ಮಾಜಿ ಅಧ್ಯಕ್ಷ ರಂಜೇಶ್, ಚಲನಚಿತ್ರ ನಟಿ ನವ್ಯ ಪೂಜಾರಿ, ವಿಶಾಖ ಶೆಟ್ಟಿ ಮುಂಬಯಿ, ವಿಶಾಲಾಕ್ಷಿ ನಿರ್ವಹಿಸಿದರು. ಎನ್.ಬೆಂಗಳೂರು, ಉದ್ಯಮಿಗಳಾದ ಶರತ್ ರಾಜ್ ಶೆಟ್ಟಿ, ವಿಜಯಕುಮಾರ್ ಬೆಳ್ತಂಗಡಿ, ಯಾದವ ಬಾಣಬೆಟ್ಟು ಮುಂಬಯಿನ ಹರೀಶ್ ಶೆಟ್ಟಿ, ಅಶೋಕ ಕರ್ಕೇರ ಸಜೀಪ, ಯಶವಂತ ಬಂಗೇರ ಕಾಪು, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಸುಪ್ರೀತ್ ಶೆಟ್ಟಿ, ಬಾಳೆಹೊನ್ನೂರು, ಪಿ.ಸಿ.ಜಯರಾಮ್, ಸುಳ್ಯ, ಕಿಶೋರ್ ಕುಮಾರ್ ಕಟ್ಟೆಮಾರ್ ಮೊದಲಾದವರು ಉಪಸ್ದಿತರಿಂದರು.
ಸಾನ್ನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್ ಸ್ವಾಗತಿಸಿ, ವಸಂತ ಪೂಜಾರಿ ಬಟ್ಟಹಿತ್ತಿಲು ವಂದಿಸಿದರು. ಬಳಿಕ ಮಂತ್ರದೇವತೆಗೆ ದೊಂದಿ ಬೆಳಕಿನಲ್ಲಿ ನರ್ತನ ಸೇವೆ ಜರಗಿತು.
