Sunday, June 29, 2025
spot_imgspot_img
spot_imgspot_img

ದ. ಕ. ಜಿಲ್ಲಾ 25ನೇ ಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಕಡೇಶಿವಾಲಯದ ವಿಂಧ್ಯಾ.ಎಸ್.ರೈ ಆಯ್ಕೆ

- Advertisement -
- Advertisement -

ಉಜಿರೆ : ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಸರ್ವಾಧ್ಯಕ್ಷತೆಯಯಲ್ಲಿ ನಡೆಯುವ ದ. ಕ. ಜಿಲ್ಲಾ 25ನೇ ಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಬಂಟ್ವಾಳ ತಾಲೂಕು ಕಡೇಶಿವಾಲಯದ ವಿಂಧ್ಯಾ.ಎಸ್.ರೈ ಆಯ್ಕೆಯಾಗಿದ್ದಾರೆ.

ಕುರುoಬ್ಲಾಜೆಗುತ್ತು ಸುಂದರ ರೈಯವರ ಧರ್ಮಪತ್ನಿಯಾಗಿರುವ ಇವರು ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭಾನ್ವಿತೆ. ಇವರ ಅಂಕಣ, ಲೇಖನ, ಚುಟುಕು, ಕವನ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಹಲವಾರು ಜಿಲ್ಲಾ, ಅಂತರ್ಜಿಲ್ಲಾ, ರಾಜ್ಯಮಟ್ಟದ ಕವಿಗೋಷ್ಠಿ,ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿ ಯಶಸ್ವಿ ಕಂಡಿದ್ದಾರೆ.

- Advertisement -

Related news

error: Content is protected !!