Sunday, June 29, 2025
spot_imgspot_img
spot_imgspot_img

ನವ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ನವ ವಿವಾಹಿತನೋರ್ವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಕೋಲಾದ ಅಂಬೇಡ್ಕರ್ ಕಾಲೋನಿ (ಅಜ್ಜಿ ಕಟ್ಟಾ ) ಸ್ವಾಗತ ಕಮಾನಿನ ಬಳಿಯ ಮನೆಯೊಂದರಲ್ಲಿ ಸಂಭವಿಸಿದೆ. ಮನೋಜ್ ಶೆಟ್ಟಿ (40) ಮೃತ ದುರ್ದೈವಿ. ನಗರದ 3 ಕಡೆ ಬಟ್ಟೆ ಅಂಗಡಿಗಳನ್ನು ನಡೆಸುತ್ತಾ ಪ್ರತಿಷ್ಠಿತ ಕುಟುಂಬವಾಗಿ ಗುರುತಿಸಿಕೊಂಡಿದ್ದ ಶಿವಾನಂದ ಶೆಟ್ಟಿ ಅವರ ಕಿರಿಯ ಮಗ ಮನೋಜ.

ಮೃತಪಟ್ಟ ವ್ಯಕ್ತಿ ಮೂರು ತಿಂಗಳ ಹಿಂದಷ್ಟೇ ಹಸೆ ಮಣೆ ಏರಿದ್ದರು. ಗಂಡ ಹೆಂಡರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು. ಅಡಿಗೆ ಕೋಣೆಯ ಬಾಗಿಲು ಹಾಕಿಕೊಂಡು, ಮನೆಯ ಮೇಲ್ಚಾವಣಿಯ ಪಕಾಸಿಗೆ ನೈಲಾನ್ ಹಗ್ಗ ಕಟ್ಟಿ, ಕುತ್ತಿಗೆಗೆ ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಸಾಂಸಾರಿಕ ಹೊಂದಾಣಿಕೆ ಕೊರತೆ, ಇಲ್ಲವೇ ಅದಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಶರಣಾಗುವ ಮುನ್ನ ಡೆತ್‌ ನೋಟ್ ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದ್ದು, ಪೊಲೀಸ್‌ ತನಿಖೆಯಿಂದ ತಿಳಿದು ಬರಬೇಕಿದೆ.

- Advertisement -

Related news

error: Content is protected !!