Tuesday, May 14, 2024
spot_imgspot_img
spot_imgspot_img

ಪುತ್ತೂರು: ಕಡಿಮೆ ಬಡ್ಡಿಯಲ್ಲಿ ಲೋನ್ ಸಿಗುವ ಜಾಹಿರಾತಿಗೆ ಮಾರು ಹೋಗಿ 7.24 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ!

- Advertisement -G L Acharya panikkar
- Advertisement -

ಪುತ್ತೂರು: ಕಡಿಮೆ ಬಡ್ಡಿಯಲ್ಲಿ ಲೋನ್ ನೀಡಲಾಗುವುದು ಎಂದು ಮೊಬೈಲ್​ಗೆ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು ಎರಡು ಕಡೆ 7.24 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಪುತ್ತೂರಿನ ರಾಮಕುಂಜದ ವ್ಯಕ್ತಿಗೆ ಕ್ಯಾಪಿಟಲ್​ ಇಂಡಿಯಾ ಫೈನಾನ್ಸ್​ ಲಿಮಿಟೆಡ್​​ನ ಹೆಸರಿನಲ್ಲಿ ಲೋನ್ ಅಪ್ಲೈಗಾಗಿ ಜನವರಿಯಲ್ಲಿ ಸಂದೇಶ ಬಂದಿತ್ತು. ಅದರಲ್ಲಿ ಸೂಚಿಸಿದಂತೆ ಪೋನ್ ನಂಬರ್​​ಗೆ ಕರೆ ಮಾಡಿದಾಗ ಈ ವ್ಯಕ್ತಿಗೆ ಶೇಕಡಾ 5ರ ಬಡ್ಡಿಯಲ್ಲಿ 5 ಲಕ್ಷ ಸಾಲ ನೀಡುವುದಾಗಿ ತಿಳಿಸಿದ್ದರು. ಅವರ ಸೂಚನೆಯಂತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಫೋಟೋ ಕಳುಹಿಸಿದ್ದರು. ಬಳಿಕ ವಿವಿಧ ಮೊಬೈಲ್​ಗಳಿಂದ ಕರೆ ಮಾಡಿ ರಿಜಿಸ್ಟ್ರೇಷನ್, ಜಿಎಸ್​​​ಟಿ ಮತ್ತು ವಿವಿಧ ಶುಲ್ಕ​​ಗಳೆಂದು ಹೇಳಿ ಹಂತ – ಹಂತವಾಗಿ 5,20,727 ರೂ. ವರ್ಗಾಯಿಸಿಕೊಂಡಿದ್ದರು.

ಇದರ ನಡುವೆ ಬಜಾಜ್​ ಫೈನಾನ್ಸ್​ ಹೆಸರಿನಲ್ಲಿ ಲೋನ್ ನೀಡುವ ಸಂದೇಶ ಬಂದಿದೆ.‌ ಅದಕ್ಕೆ ಕರೆ ಮಾಡಿದಾಗ ಶೇಕಡಾ 5ರ ಬಡ್ಡಿಯಲ್ಲಿ 9 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಫೋಟೋ ಪಡೆದುಕೊಂಡಿದ್ದಾರೆ. ಬಳಿಕ ರಿಜಿಸ್ಟ್ರೇಷನ್, ಜಿಎಸ್ಟಿ ಮತ್ತು ವಿವಿಧ ಹೇಳಿ ಹಂತ ಹಂತವಾಗಿ 2,03,598 ರೂ. ಹಣ ಟ್ರಾನ್ಸ್​ಫರ್ ಮಾಡಿಸಿದ್ದಾರೆ. ಹೀಗೆ ಎರಡು ಕಡೆಯಿಂದ ಶೇಕಡಾ 5ರ ಬಡ್ಡಿಯಲ್ಲಿ ಸಾಲ ಪಡೆಯಲು 7,24,325 ರೂ. ಟ್ರಾನ್ಸ್​ಫರ್​ ಮಾಡಿದ್ದಾರೆ. ಈ ಘಟನೆ ಬಳಿಕ ಆ ವ್ಯಕ್ತಿ ಮಂಗಳೂರಿನ ಸೈಬರ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

driving
- Advertisement -

Related news

error: Content is protected !!