- Advertisement -
- Advertisement -
ಪುತ್ತೂರು: ಮನೆಯಲ್ಲಿ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟಿನೆ ಕೇಪುಳ ಎಂಬಲ್ಲಿ ನಡೆದಿದೆ. ಆನಂದ(28) ಮೃತ ದುರ್ದೈವಿ.
ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಕೇಪುಳ ನಿವಾಸಿ ಆನಂದ್ ಎಂಬವರು ನಮ್ಮ ಮನೆಯಲ್ಲಿ ತಲೆ ತಿರುಗಿ ಕುಸಿದು ಬಿದ್ದಿದ್ದರು. ಬೀಳುವ ವೇಳೆ ಗೋಡೆಗೆ ಅವರ ತಲೆ ತಾಗಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
- Advertisement -