

ಪುತ್ತೂರು : ಅಪ್ರಾಪ್ತೆಯನ್ನು ಹೆದರಿಸಿ ಲೈಂಗಿಕ ಸಂಪರ್ಕ ಮಾಡಿರುವ ಬಗ್ಗೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಅಪ್ರಾಪ್ತ ಬಾಲಕಿಯು ಕಾಸರಗೋಡಿನ ತಾಯಿ ಮನೆಯಲ್ಲಿದ್ದಾಗ ಜುಬೈರ್ ಎಂಬಾತ ಬಾಲಕಿಯನ್ನು ನೋಡಿ ಇಷ್ಟಪಟ್ಟು ಆಕೆಯ ತಾಯಿಯಲ್ಲಿ ಆಕೆಯನ್ನು ಮದುವೆ ಮಾಡಿ ಕೊಡುವಂತೆ ಕೇಳಿಕೊಂಡಿದ್ದನು. ನಂತರ ಸಲುಗೆ ಬೆಳೆಸಿಕೊಂಡಿದ್ದ. ಇದಕ್ಕೆ ಬಾಲಕಿಯ ತಾಯಿ ೧೮ ವರ್ಷ ಪೂರ್ಣಗೊಂಡ ನಂತರ ಮದುವೆ ಮಾಡಿಕೊಡುವುದಾಗಿ ತಿಳಿಸಿದ್ದರು. ಬಳಿಕ ಜುಬೈರ್ ಬಾಲಕಿಯೊಂದಿಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದು ನಂತರದ ದಿನಗಳಲ್ಲಿ ಆರ್ಯಾಪು ಗ್ರಾಮದಲ್ಲಿ ವಾಸವಿದ್ದ ಬಾಲಕಿಯ ಮನೆಯ ಬಳಿ ತಡರಾತ್ರಿ 12 ಗಂಟೆಗೆ ಬಂದು ಬಾಗಿಲು ತೆಗೆಯುವಂತೆ ಒತ್ತಾಯಿಸಿ ನಂತರ ಬಾಲಕಿ ಬಾಗಿಲು ತೆರೆದ ಸಂದರ್ಭ ಆಕೆ ಕಿರುಚಿಕೊಳ್ಳದಂತೆ ಆಕೆಯ ಬಾಯನ್ನು ತನ್ನ ಕೈಯಿಂದ ಮುಚ್ಚಿ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಈ ವಿಚಾರವನ್ನು ಯಾರಿಗೂ ಹೇಳಬಾರದು, ಒಂದು ವೇಳೆ ಹೇಳಿದ್ದಲ್ಲಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ ಹಾಗೂ ಮುಂದೆಯೂ ಮನೆಗೆ ಬರುವುದಾಗಿ ಹೇಳಿದ್ದು ಇದಕ್ಕೆ ಬಾಲಕಿಯು ಒಪ್ಪದೇ ಇದ್ದಾಗ ಅವಳೊಡನೆ ಗಲಾಟೆ ನಡೆಸಿರುತ್ತಾನೆಂದು ಬಾಲಕಿ ನೀಡಿದ ದೂರಿನಲ್ಲಿ ಆರೋಪಿಲಾಗಿದ್ದು ಜುಬೈರ್ ವಿರುದ್ದ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತಯೊಬ್ಬರು ನೀಡಿರುವ ದೂರಿನ ಮೇರೆಗೆ ಕಾಸರಗೋಡು ವಿದ್ಯಾನಗರದ ಜುಬೈರ್ ಎಂಬವನ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.

