Tuesday, May 7, 2024
spot_imgspot_img
spot_imgspot_img

ಪುತ್ತೂರು: ಶ್ರೀರಾಮ ಗೆಳೆಯರ ಬಳಗ(ರಿ) ಪುತ್ತಿಲ ವತಿಯಿಂದ ಪ್ರವೀಣ್ ರೈ ಪಾಲ್ತಾಡಿಯವರಿಗೆ ಸನ್ಮಾನ

- Advertisement -G L Acharya panikkar
- Advertisement -

ಪುತ್ತೂರು: ಶ್ರೀ ರಾಮ ಗೆಳೆಯರ ಬಳಗ(ರಿ)ಪುತ್ತಿಲ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯದ ಹೆಡ್ ಕಾನ್‌ಸ್ಟೇಬಲ್ ಪ್ರವೀಣ್ ರೈ ಪಾಲ್ತಾಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನಡುಕೂಟೇಲು ವಿಶ್ವನಾಥ ರೈ ಮತ್ತು ಲೀಲಾವತಿ ದಂಪತಿಗಳ ಪುತ್ರ ಪ್ರವೀಣ್ ರೈ ಕುಮಾರ್ ಕಳೆದ 14 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಜಿಲ್ಲಾ ಅಪರಾಧ ಪತ್ತೆ ದಳದಲ್ಲಿ ಸೇವೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ನಡೆದಂತಹ ಅನೇಕ ದರೋಡೆ, ಕೊಲೆ, ಸುಲಿಗೆ, ಕಳ್ಳತನ ಕೋಮು ಗಲಭೆಗಳ ಸಂದರ್ಭದಲ್ಲಿ ಆರೋಪಿಗಳ ಶೀರ್ಘ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ತನಿಖಾಧಿಕಾರಿಗಳ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ.

14 ವರ್ಷಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ 30ಪ್ರಶಂಸನಾ ಪತ್ರ, ನಗದು ಬಹುಮಾನಗಳನ್ನು ಪಡೆದುಕೊಂಡ ಪ್ರವೀಣ್, ಇಲಾಖೆಯಲ್ಲಿನ ತಮ್ಮ ಕಾರ್ಯದಕ್ಷತೆಗೆ 2020ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದಿದ್ದಾರೆ.

ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿದು ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರುಗಳಿಸಿದ ಪ್ರವೀಣ್ ಶೆಟ್ಟಿಯವರು ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯ, ಸಮಾಜಮುಖಿ ಚಿಂತನೆಗಳೊಂದಿಗೆ ಅಪರಾಧ ಜಗತ್ತಿನಲ್ಲಿ ನಿರ್ನಾಮಕ್ಕಾಗಿ ಹಗಲಿರುಳು ದುಡಿದು ಅನೇಕ ಗೌರವ, ಸನ್ಮಾನಗಳನ್ನು ಪಡೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅನರ್ಘ್ಯ ರತ್ನದಂತೆ ಮಿನುಗುವ ಇವರು ಅಪರಾಧಿಗಳ ಪಾಲಿನ ದುಃಸ್ವಪ್ನವಾಗಿ , ಅಸಹಾಯರಕರ ಪಾಲಿನ ಆಪತ್ಬಾಂಧವರಾಗಿ ಬದುಕಿ ಸಾಧಿಸಿದವರು. ಊರ ಜನತೆಯ ಹೆಮ್ಮೆಯ ಯುವಮುಂದಾಳುವಾಗಿ ಯುವ ಸಂಘನೆಗಳೊಂದಿಗೆ ಬೆರೆತು, ಮುಂದಾಳತ್ವ ವಹಿಸಿ ಯುವ ನೇತಾರರಾಗಿ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡವರು ಪ್ರವೀಣ್ ಶೆಟ್ಟಿ.

- Advertisement -

Related news

error: Content is protected !!