Sunday, June 29, 2025
spot_imgspot_img
spot_imgspot_img

ಪ್ರಾದೇಶಿಕ ಅಸಮತೋಲನ ಖಂಡಿಸಿ ಕಾಂಗ್ರೆಸ್​ನಿಂದ ಕಲ್ಯಾಣ ಕರ್ನಾಟಕ ಯಾತ್ರೆ – ಈಶ್ವರ ಖಂಡ್ರೆ

- Advertisement -
- Advertisement -

ಪ್ರಾದೇಶಿಕ ಅಸಮತೋಲನ ಖಂಡಿಸಿ ಕಾಂಗ್ರೆಸ್ ನಿಂದ ಕಲ್ಯಾಣ ಕರ್ನಾಟಕ ಯಾತ್ರೆ ನಡೆಸಲಾಗುವುದು. ಇದಕ್ಕಾಗಿ ಈಗಾಗಲೆ ರೂಪರೇಷೆ ಸಿದ್ಧಗೊಳಿಸುತ್ತಿದ್ದು, ಬರುವ ಎಪ್ರಿಲ್​ನಲ್ಲಿ ಯಾತ್ರೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೋಮ ಸೌಹಾರ್ದವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾತ್ರೆ ಮಹತ್ವ ಪಡೆದಿದೆ. ಈಗಾಗಲೇ ಈ ಬಗ್ಗೆ ಎರಡು ಬಾರಿ ಸಭೆ ಕರೆದು ಚರ್ಚೆ ಮಾಡಲಾಗಿದೆ ಎಂದರು.

ಬಿಜೆಪಿ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಬಜೆಟ್ ನಲ್ಲಿ ಈ ಹಿಂದೆ ಮೀಸಲಿಟ್ಟ ಹಣವನ್ನೇ ಖರ್ಚು ಮಾಡಿಲ್ಲ. ಈ ಬಜೆಟ್ ನಲ್ಲಿ ಮತ್ತೆ ಮೂರು ಸಾವಿರ ಕೋಟಿ ನೀಡಿದ್ದಾರೆ ಎಂದವರು ಆಪಾದಿಸಿದರು.

- Advertisement -

Related news

error: Content is protected !!