Monday, May 6, 2024
spot_imgspot_img
spot_imgspot_img

“ಬಡವರ ಮನೆ ಹುಡುಗಿ ಬೇಡ, ನಿಮಗೆ ಶ್ರೀಮಂತರ ಮನೆ ಹುಡುಗಿ ಬೇಕು ನೀನು ಅಮ್ಮನ ಮಗ ಎಂದು ಗೊತ್ತಿರಲಿಲ್ಲ” ; ಡೆತ್‌ನೋಟ್‌ ಬರೆದು ನವವಿವಾಹಿತೆ ಆತ್ಮಹತ್ಯೆ

- Advertisement -G L Acharya panikkar
- Advertisement -

ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದೆ. ಪರಿಮಳ (23) ಮೃತ ದುರ್ದೈವಿ. ಕೋಣನಹಳ್ಳಿ ಗ್ರಾಮದ ಪರಿಮಳ ಕಳೆದ ಅಕ್ಟೋಬರ್ 28ರಂದು ಮಂಡ್ಯದ ಕೀಲಾರ ಗ್ರಾಮದ ಮಧು ಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು.

ಕುಟುಂಬಸ್ಥರ ಸಮ್ಮತಿ ಸಿಗದ ಕಾರಣ ದೇವಸ್ಥಾನವೊಂದರಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಇವರು ಮದುವೆಯಾಗಿದ್ದರು. ಆದರೆ ಮದುವೆ ಆದ 2 ತಿಂಗಳಿಗೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡನ ಮನೆಯ ಅಟ್ಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪರಿಮಳ ಶವ ಪತ್ತೆ ಆಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಪರಿಮಳ ಪತಿ ಮಧು ಕುಮಾರ್ ನಾಪತ್ತೆ ಆಗಿದ್ದು, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಪರಿಮಳಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸಿ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?

ಮುದ್ದು… ಅಮ್ಮನ್ನ ಬಿಟ್ಟರೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದು ನಿನ್ನನ್ನು. ಆದರೆ ನನ್ನಿಂದ ನಿನಗೆ ಯಾವ ಖುಷಿನೂ ಇಲ್ಲ. ಮದುವೆ ಆದ ದಿನದಿಂದ ನಿನಗೆ ನಿನ್ನ ಅಮ್ಮನಿಗೆ ಯಾವ ಖುಷಿ, ನೆಮ್ಮದಿಯೂ ಕೊಡಲಿಲ್ಲ. ನಾನು ನಿನಗೆ ತುಂಬಾ ನೋವು ಕೊಟ್ಟಿರುವೆ. ದಯವಿಟ್ಟು ಕ್ಷಮಿಸು. ನಾನು ನಿನಗೆ ಒಳ್ಳೆ ಜೋಡಿ ಆಗಲಿಲ್ಲ. ಹಾಗೆಯೇ ಮನೆಗೆ ಒಳ್ಳೆ ಸೊಸೆಯೂ ಆಗಲಿಲ್ಲ.

ನಿನ್ನ ಅಮ್ಮ ಏನೂ ಕಲಿಸಿಲ್ಲ, ಏನು ಅಂಥ ಹೆತ್ತಿದ್ದಾಳೋ ಎಂದೆಲ್ಲ ನಿನ್ನ ಅಮ್ಮ ನನಗೆ ಹೇಳುತ್ತಾರೆ. ನನ್ನಿಂದ ಅಮ್ಮನಿಗೂ ಕೆಟ್ಟ ಹೆಸರು, ನಾನು ಹುಟ್ಟಿದ್ದೆ ತಪ್ಪು, ಏನೋ ಹುಟ್ಟಿಬಿಟ್ಟೆ. ನಾನು ಜಾಸ್ತಿ ದಿನ ಇರಲ್ಲ. ನಿನಗೆ ಒಳ್ಳೆಯ ಹುಡುಗಿ ಸಿಗಲಿ, ನಿನ್ನ ಮತ್ತು ಅಮ್ಮನ ಚೆನ್ನಾಗಿ ನೋಡಿಕೊಳ್ಳಲಿ. ನಿಮ್ಮ ಮನೆಗೆ ಸರಿಯಾದ ಬೀಗತಿ ಸಿಗಲಿಲ್ಲ. ಬಡವರ ಮನೆ ಹುಡುಗಿ ಬೇಡ, ನಿಮಗೆ ಶ್ರೀಮಂತರ ಮನೆ ಹುಡುಗಿ ಬೇಕು. ನೀನು ಅಮ್ಮನ ಮಗ ಎಂದು ಗೊತ್ತಿರಲಿಲ್ಲ, ನಿನ್ನ ಅಮ್ಮನ ಚೆನ್ನಾಗಿ ನೋಡಿಕೊ ಎಂದು ಪರಿಮಳ ಸಾಯುವ ಮೊದಲು ಪತ್ರ ಬರೆದಿದ್ದಾಳೆ.

- Advertisement -

Related news

error: Content is protected !!