- Advertisement -
- Advertisement -
ಬದಿಯಡ್ಕ: ಮನೆಯ ಟೆರೇಸ್ನಿಂದ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಬದಿಯಡ್ಕ ಸಮೀಪದ ಕೆಡೆಂಜಿ ಎಂಬಲ್ಲಿ ಈ ಘಟನೆ ನಡೆದಿದೆ. ಬದಿಯಡ್ಕ ಸಮೀಪದ ಕೆಡೆಂಜಿ ಬಳಿಯ ಮಹಾಲಿಂಗ ನಾಯ್ಕರ ಪುತ್ರ ಗಂಗಾಧರ(40) ಮೃತಪಟ್ಟ ಯುವಕ.
ಕೆಡೆಂಜಿಯ ಸಂಬಂಧಿಕರ ಮನೆಯ ಟೆರೇಸಿನಲ್ಲಿ ನಿಂತಿದ್ದಾಗ ಜಾರಿ ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಅವರು ಮೃತಪಟ್ಟಿದ್ದರು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಗಂಗಾಧರ ಅವರು ಕೂಲಿ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
- Advertisement -