Saturday, April 20, 2024
spot_imgspot_img
spot_imgspot_img

ಬಾಡಿಗೆ ನೆಪದಲ್ಲಿ ಕರೆದೊಯ್ದು ಆಟೋ ಚಾಲಕನ ಕೊಲೆಗೆ ಯತ್ನ..!

- Advertisement -G L Acharya panikkar
- Advertisement -
vtv vitla

ಮೈಸೂರು: ಪ್ರಯಾಣಿಕನ ಸೋಗಿನಲ್ಲಿ ಆಟೋದಲ್ಲಿ ಹತ್ತಿದ ದುಷ್ಕರ್ಮಿಯೋರ್ವ ಆಟೋ ಚಾಲಕನ ಕತ್ತು ಕೊಯ್ದು ಕೊಲೆಗೆ ಯತ್ನಿಸಿ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಆಟೋ ಚಾಲಕ ತೌಸೀಫ್ ಪಾಶಾರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

vtv vitla

ಮಂಗಳವಾರ ರಾತ್ರಿ 10 ಗಂಟೆಯ ವೇಳೆ ನಗರದ ಚೆಲುವಾಂಬ ಆಸ್ಪತ್ರೆಯ ಬಳಿ ತೌಸೀಫ್ ಪಾಶಾರವರ ಆಟೋಗೆ ದುಷ್ಕರ್ಮಿಯೊಬ್ಬ ಹತ್ತಿದ್ದು, ಗೋಕುಲಂನ ನಿರ್ಮಲಾ ಕಾನ್ವೆಂಟ್ ಬಳಿ ಬಿಡುವಂತೆ ತಿಳಿಸಿದ್ದ.

ನಿರ್ಮಲಾ ಕಾನ್ವೆಂಟ್ ಬಳಿಯ ಆಟೋ ನಿಲ್ದಾಣ ತಲುಪುತ್ತಿದ್ದಂತೆಯೇ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ದುಷ್ಕರ್ಮಿ, ಹರಿತವಾದ ಆಯುಧದಿಂದ ತೌಸೀಫ್ ಪಾಶಾರ ಕುತ್ತಿಗೆ ಕೊಯ್ದು, ಕೊಲೆಗೆ ಯತ್ನಿಸಿದ್ದಾನೆ. ಬಳಿಕ ಆಟೋವನ್ನು ಹಿಂಬಾಲಿಸಿ ಬಂದ ಬೈಕ್’ನಲ್ಲಿ ಪರಾರಿಯಾಗಿದ್ದಾನೆ.

vtv vitla

ದುಷ್ಕರ್ಮಿಯನ್ನು ಹಿಡಿಯಲು ತೌಸೀಫ್ ಪಾಶಾ ಪ್ರಯತ್ನಪಟ್ಟರೂ, ತೀವ್ರ ರಕ್ತಸ್ರಾವದಿಂದ ಅಲ್ಲೇ ಕುಸಿದುಬಿದ್ದಿದ್ದಾರೆ. ಬಳಿಕ ಸಾರ್ವಜನಿಕರು ಪಾಶಾರನ್ನು ಆದಿತ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪಾಶಾರವರ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಕೂಡಲೇ ಆದಿತ್ಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ತೌಸೀಫ್ ಪಾಶಾರ ಸಹೋದರ ಫೈರೋಝ್ ಪಾಶಾ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!