Friday, March 29, 2024
spot_imgspot_img
spot_imgspot_img

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ; ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

- Advertisement -G L Acharya panikkar
- Advertisement -

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದೆ. ವಿದ್ಯಾಸಂಸ್ಥೆಗಳಲ್ಲಿ ಹಬ್ಬದ ಕಲರವ ಮೇಳೈಸಿದೆ. ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮಾಣಿ ಲಯನ್ಸ್ ಘಟಕದ ಸಹಯೋಗದಲ್ಲಿ ಸಂಭ್ರಮದಿಂದ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸೈನಿಕ ದಯಾನಂದ ಪೂಜಾರಿಯ ಧ್ವಜಾರೋಹಣ ಮಾಡಿದರು.

ಲಯನ್ಸ್ ಮಾಣಿ ಘಟಕದ ಅಧ್ಯಕ್ಷ ಉಮೇಶ್ ಪಿ , ಶಾಲಾ ಸಂಚಾಲಕ ಜೆ ಪ್ರಹ್ಲಾದ ಶೆಟ್ಟಿ, ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ., ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ, ಶಾಲಾ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ, ಲಯನ್ಸ್ ನ ಪದಾಧಿಕಾರಿಗಳಾದ ರಾಜೇಶ್, ರವಿಕಿರಣ್, ಡಾ. ಜಗದೀಶ್ ಭಟ್, ಬಾಲಕೃಷ್ಣ, ಮೋಹನ್ ಶೆಟ್ಟಿ, ರತ್ನಾಕರ ರೈ, ಮಾರ್ಷಲ್ ಪಾಯಸ್, ಕೂಸಪ್ಪ ಪೂಜಾರಿ, ಗಂಗಾಧರ ರೈ, ಶ್ರೀನಾಥ್ ಆಳ್ವ , ನಾರಾಯಣ ಸಾಲ್ಯಾನ್, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ದಯಾನಂದ ಪೂಜಾರಿರವರನ್ನು ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!