- Advertisement -
- Advertisement -


ಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗಾಂಧಿನಗರ ಕಾಫಿನಡ್ಕ ತೆಂಕಕಾರಂದೂರು ನಿವಾಸ ರಮಾನಂದ(42) ಆಕಸ್ಮಿಕವಾಗಿ ನಿನ್ನ ಮಧ್ಯಾಹ್ನ ಅವರ ಮನೆ ಸಮೀಪದ ಬಾವಿಗೆ ಬಿದ್ದಿದ್ದಾರೆ. ರಮಾನಂದ ಅವರು ನಿನ್ನ ಮಧ್ಯಾಹ್ನವರೆಗೆ ಮನೆಯಲ್ಲಿ ಇದ್ದು, ಬಳಿಕ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದ ಆತಂಕಗೊಂಡ ಮನೆ ಮಂದಿ ಹುಡುಗಾಟ ನಡೆಸಿದರೆನ್ನಲಾಗಿದೆ.

ರಾತ್ರಿ ವೇಳೆ ರಮಾನಂದರ ಚಪ್ಪಲಿ ಬಾವಿ ಸಮೀಪ ಸಿಕ್ಕಿದರಿಂದ ತಕ್ಷಣ ಗ್ರಾ.ಪಂ.ಅಧ್ಯಕ್ಷ ಹೇಮಂತ ರವರು ಬೆಳ್ತಂಗಡಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಸ್ಮಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.ಈ ಬಗ್ಗೆ ವೇಣೂರು ಠಾಣಿಯಲ್ಲಿ ಪುಕರಣ ದಾಖಲಾಗಿದೆ. ಶವವನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಪುಮುಖ ಅಗ್ನಿಶಾಮಕ ಕೃಷ್ಣ.ಪಿ. ನಾಯ್ಕ, ಚಾಲಕ ಲಿಂಗರಾಜ್ ಲಮಾಣಿ,ಉಸ್ಮಾನ್,ಮಹಮ್ಮದ್ ಜಂಬಗಿ, ಅರುಣ್ ಭಾಗಿಯಾಗಿದ್ದರು.

- Advertisement -