


ಬೆಳ್ತಂಗಡಿ : ಪರಿಚಯಸ್ಥರೇ ಸೇರಿಕೊಂಡು ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿ ಬೆದರಿಸಿ ‘ಗೂಗಲ್ ಪೇ’ ಮೂಲಕ ಹಣ
ವರ್ಗಾಯಿಸಿಕೊಂಡಿದ್ದಲ್ಲದೇ, ಮನೆಯಂಗಳದಲ್ಲಿದ್ದ ದ್ವಿಚಕ್ರ ವಾಹನವನ್ನು ಕದ್ದೊಯ್ದ ಘಟನೆ ಪಡಂಗಡಿಯಲ್ಲಿ ನಡೆದಿದೆ.
ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ರಿಯಾಜ್ ಮತ್ತು ಫೈಜಲ್ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಡಂಗಡಿ ಗ್ರಾಮದ
ಜಾನೆಬೈಲು ಬಳಿಯ ನಿವಾಸಿ ಜುವಾಮ್ ಗೋವಿಯಸ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಮನೆಯ ಸಮೀಪದ ರಬ್ಬರ್ ಶೆಡ್ ಬಳಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು ಹಲ್ಲೆ ನಡೆಸಿದರು. ಆಯತಪ್ಪಿ ನಾನು ನೆಲಕ್ಕೆ ಬಿದ್ದಾಗ ಕುತ್ತಿಗೆ ಬಿಗಿದು ಬೆದರಿಸಿ ಗೂಗಲ್ ಪಿನ್ ಕೇಳಿ ಅವರ ಮೊಬೈಲ್ ನಿಂದ ₹ 82 ಸಾವಿರವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡರು. ನನ್ನ ಮೊಬೈಲ್ ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದರು ಎಂದು ದೂರಿನಲ್ಲಿ ಗೋವಿಯಸ್ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.