“ನನ್ನ ತಂದೆ ನಾಟಕ, ಸಿನಿಮಾ, ನಟ-ನಿರ್ದೇಕರಾಗಿದ್ದು ನಟಿಯಾಗಲು ನನಗೆ ಸ್ಫೂರ್ತಿ” :- ವೆನ್ಯ ರೈ
ಖ್ಯಾತ ತುಳು ರಂಗಭೂಮಿ ಹಾಗೂ ತುಳು, ಕನ್ನಡ ಸಿನಿಮಾ, ಸೀರಿಯಲ್ ನಟ ಚೇತನ್ ರೈ ಮಾಣಿ ಹಾಗೂ ರಶ್ಮಿ. ಸಿ ರೈ ದಂಪತಿಗಳ ಪುತ್ರಿ, ಬೆಳ್ಳಿಪ್ಪಾಡಿ ಸರ್ವತ್ತೋಡಿ ಸಂಕಪ್ಪ ರೈಯವರ ಮೊಮ್ಮಗಳು ಸ್ಯಾಂಡಲ್ವುಡ್ನ ಯುವ ಪ್ರತಿಭೆ ವೆನ್ಯ ರೈ ಇದೀಗ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದ ಕುಡಿ ವೆನ್ಯ ರೈ ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ.
ವೆನ್ಯ ರೈ ಈಗಾಗಲೇ ‘ಭಾವಪೂರ್ಣ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಪ್ರವೇಶಕ್ಕೆ ಸಜ್ಜಾಗಿದ್ದು, ಕಿರುತೆರೆಯ ಸ್ಟಾರ್ ನಿರ್ದೇಶಕ ಹಯವದನ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ದೊಡ್ಡ ಪರದೆಯ “ಎಲ್ಲೋ ಜೋಗಪ್ಪ ನಿನ್ನರಮನೆ” ಚಲನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ “ಭಾವಪೂರ್ಣ” ಚಿತ್ರದಲ್ಲಿ ವೆನ್ಯ ರೈ ನಟಿಸಿದ್ದು, ಈ ಚಿತ್ರದಲ್ಲಿ ಹಿರಿಯ ನಟ ರಮೇಶ್ ಪಂಡಿತ್, ಮಂಜುನಾಥ್ ಹೆಗಡೆ, ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್, ವಿ.ಮನೋಹರ್, ಸುಜಯ್ ಶಾಸ್ತ್ರಿ, ಎಂ.ಕೆ.ಮಠ, ಉಗ್ರಂ ಮಂಜು, ಜೆಜಿ ಮುಂತಾದ ಪ್ರಸಿದ್ಧ ಕಲಾವಿದರ ಜೊತೆ ವೆನ್ಯ ರೈ ನಟಿಸಿದ್ದಾರೆ.
“ನಿರ್ದೇಶಕ ಹಯವದನ ಅವರು ಎಡಿಟ್ ಡೆಸ್ಕ್ನಲ್ಲಿ ‘ಭಾವಪೂರ್ಣ’ ಸಿನಿಮಾದಲ್ಲಿನ ನನ್ನ ನಟನೆಯನ್ನು ವೀಕ್ಷಿಸಿ ಬಳಿಕ “ಎಲ್ಲೋ ಜೋಗಪ್ಪ ನಿನ್ನರಮನೆ” ಚಲನ ಚಿತ್ರಕ್ಕೆ ನಾಯಕಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಮಾರ್ಚ್ನಲ್ಲಿ ಶೂಟಿಂಗ್ ಆರಂಭಿಸಲು ಸಜ್ಜಾಗಿದ್ದಾರೆ.
ನಟಿಯಾಗುವ ತನ್ನ ಆಕಾಂಕ್ಷೆಗಳ ಬಗ್ಗೆ ಮಾತನಾಡುತ್ತಾ, ನಟನೆ ಅನ್ನೋದು ನನ್ನ ರಕ್ತದಲ್ಲಿಯೇ ಇದೆ.. ಅದು ಕುಟುಂಬದಲ್ಲಿಯೇ ಇದೆ, ನನ್ನ ತಂದೆ ಚೇತನ್ ರೈ ಮಾಣಿ ಅವರು ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಮತ್ತು ಹಲವಾರು ಟೆಲಿ ಧಾರಾವಾಹಿಗಳಲ್ಲಿ ಹಾಗೂ ನಾಟಕಗಳಲ್ಲಿ ನಿರ್ದೇಶಕ ಮತ್ತು ನಟರಾಗಿದ್ದು, ನಟಿಯಾಗಲು ನನಗೆ ಸ್ಫೂರ್ತಿಯಾಗಿದೆ” ಎಂದು ಪುತ್ತೂರಿನ ವೆನ್ಯ ರೈ ತಮ್ಮ ಅಭಿಪ್ರಾಯವನ್ನು ಹಂಚಿಕೊAಡಿದ್ದಾರೆ.
ನಿಜ ಜೀವನದಲ್ಲೂ ಪಟ ಪಟನೆ ಮಾತನಾಡುತ್ತಾ ಎಲ್ಲರನ್ನೂ ಆಕರ್ಷಿಸುವ ಪುತ್ತೂರಿನ ಈ ಚೆಂದುಳ್ಳಿ ಚೆಲುವೆ “ಎಲ್ಲೋ ಜೋಗಪ್ಪ ನಿನ್ನರಮನೆ” ಚಿತ್ರದಲ್ಲಿ ಉತ್ತರ ಭಾರತದ ಕಾಲೇಜು ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸಲಿದ್ದು, ಇದೊಂದು ಪ್ರವಾಸ ಕಥನದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಕಲಾವಿದರಿಗೆ ಚಾಲೆಂಜಿಂಗ್ ಆಗಿದೆ ಎಂದು ನಿರ್ದೇಶಕ ಹಯವದನ ಹೇಳಿದ್ದಾರೆ.
ಪಂಡೋರಸ್ ಬಾಕ್ಸ್ ಪ್ರೊಡಕ್ಷನ್ ಮತ್ತು ಕೃಷ್ಣಛಾಯಾ ಚಿತ್ತಾಲ್ ಬ್ಯಾನರ್ನಡಿಯಲ್ಲಿ ಪವನ್ ಸಿಮಿಕೇರಿ ಸಹಯೋಗದೊಂದಿಗೆ ಹಯವದನ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ಕಂಬ್ಳಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಶಿವಪ್ರಸಾದ್ ಸಂಗೀತ, ರವಿಚಂದ್ರನ್ ಸಂಕಲನ ಮತ್ತು ನಟರಾಜ್ ಮದ್ದಳ್ಳ ಛಾಯಾಗ್ರಹಣವಿದೆ. ಈ ಚಿತ್ರದ ಶೂಟಿಂಗ್ ಉತ್ತರ ಭಾರತದ ಕಾಶಿ, ಕೈಲಾಸ ಮಾನಸ ಪರ್ವತ, ಕುಲುಮನಹಳ್ಳಿ, ಋಷಿಕೇಶ, ಹರಿದ್ವಾರ ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ವಿದ್ಯಾಭ್ಯಾಸದ ಜೊತೆಗೆ ಕಿರಿ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ವೆನ್ಯ ರೈಯವರಿಗೆ ಕಾಲೇಜು ವತಿಯಿಂದ ಸಂಪೂರ್ಣ ಸಹಕಾರ ದೊರೆತಿದ್ದು, ಕಾಲೇಜು ಪ್ರಾಂಶುಪಾಲರು ವಿಜಿ ಭಟ್, ಉಪನ್ಯಾಸಕ ವರ್ಗ ಸೇರಿದಂತೆ ವಿದ್ಯಾರ್ಥಿ ಬಳಗದಿಂದ ಬೆಸ್ಟ್ ವಿಶಸ್ ನೀಡಿ ಸಹಕರಿಸಿದ್ದಾರೆ. ಈ ನಡುವೆ ಮಲಾರ್ ಬೀಡು ಪುಪ್ಟರಾಜ್ ರೈ ಅವರ ಆರಾಟ ಚಿತ್ರದಲ್ಲೂ ವೆನ್ಯ ರೈ ನಾಯಕಿಯಾಗಿ ನಟಿಸಲಿದ್ದಾರೆ.