Saturday, April 20, 2024
spot_imgspot_img
spot_imgspot_img

ಮಂಗಳೂರು: ಫಾಝಿಲ್‌ ಹತ್ಯೆಗೆ ಬಳಸಿದ ಕಾರಿನ ಮಾಲಕ ವಶಕ್ಕೆ ಪಡೆದ ಪೊಲೀಸರು

- Advertisement -G L Acharya panikkar
- Advertisement -
vtv vitla

ಸುರತ್ಕಲ್‌: ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರಿನ ಮಾಲಕ ಮಾಲಕನನ್ನು ವಿಚಾರಣೆಗಾಗಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಂತಕರು ಉಪಯೋಗಿಸಿದ ಕಾರು ಮತ್ತು ಕಾರು ಮಾಲೀಕ ಸುರತ್ಕಲ್‌ ಕೋಡಿಕೆರೆ ನಿವಾಸಿ ಅಜಿತ್‌ ಕಾಸ್ಮಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕ್ರಿಶ್ಚಿಯನ್ ಸಮುದಾಯದ ಅಜಿತ್‌ ಕಾಸ್ಮಾ ಈ ಹಿಂದೆ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಮದುವೆಯಾದ ಬಳಿಕ ಕಾರು ಬಾಡಿಗೆಗೆ ನೀಡುವ ಉದ್ಯಮ ಶುರುಮಾಡಿದ್ದ. ಅದರಂತೆ ಸ್ವಿಫ್ಟ್‌, ಸ್ವಿಫ್ಟ್ ಡಿಸ್ಟರ್, ಇಯೋನ್ ಕಾರು ಒಟ್ಟು ಮೂರು ಕಾರುಗಳನ್ನು ಇಟ್ಟುಕೊಂಡು ಬಾಡಿಗೆಗೆ ನೀಡುವ ಕೆಲಸ ಮಾಡುತ್ತಿದ್ದ. ಮೊನ್ನೆ ಕೂಡ ಪರಿಚಯಸ್ಥ ಹಂತಕರು ಇಯೋನ್ ಕಾರು ಬಾಡಿಗೆ ಪಡೆದುಕೊಂಡು ಕೃತ್ಯ ಎಸಗಿದ್ದರು ಎನ್ನಲಾಗಿದೆ.

ಇನ್ನು ಕಾರು ಮಾಲೀಕ ಅಜಿತ್ ಕಾಸ್ಮಾ ಯಾವ ರೀತಿಯಲ್ಲಿ ಕೃತ್ಯ ಎಸೆಯಲು ಕಾರಣವಾಗಿದ್ದಾನೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿಯಲಿದೆ.

ಈಗಾಗಲೇ ಈ ಪ್ರಕರಣ ಸಂಬಂಧಿಸಿ 21 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ನಾಲ್ವರು ಮತ್ತು ಇತರ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಶೀಘ್ರ ಬಂಧನ‌ ನಡೆಯಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!