- Advertisement -
- Advertisement -
ಮಂಗಳೂರು: ಹಣ್ಣುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಅನ್ಯಧರ್ಮದ ಯುವಕನನ್ನು ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಸಾಗಿಸಿದ ಮಾನವೀಯ ಘಟನೆ ಇಂದು ಮುಂಜಾನೆ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ.
ಉಳಾಯಿಬೆಟ್ಟು ನಿವಾಸಿ ಚಾಲಕ ಅಬ್ದುಲ್ ಅಶ್ರಪ್ ಅಪಘಾತಕ್ಕೀಡಾದ ಗಾಯಾಳು. ಮಂಗಳೂರಿನ ಉಜ್ಜೋಡಿ ಸಮೀಪ ಕೇರಳಕ್ಕೆ ತರಕಾರಿ, ಫ್ರುಟ್ಸ್ ತುಂಬಿ ಸಾಗುತ್ತಿದ್ದ ಲಾರಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿತ್ತು.
ಆ ಸಂದರ್ಭ ಹಿಂದೂ ಯುವ ಸೇನೆಯ ವಾರಿಯರ್ಸ್ ಭುವನ್ ಎಕ್ಕೂರ್ ಹಾಗೂ ಪ್ರವೀಣ್ ಎಕ್ಕೂರು ಅವರು ತುರ್ತಾಗಿ ಗುಣಕರ ಎಂಬವರ ಅ್ಯಂಬುಲೆನ್ಸ್ ಸೇವೆ ಒದಗಿಸಿಕೊಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಪಂಪ್ ವೆಲ್ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಮಹತ್ಕಾರ್ಯ ಮಾಡಿದ್ದಾರೆ.
- Advertisement -