Friday, May 3, 2024
spot_imgspot_img
spot_imgspot_img

ರಾಜ್ಯ ನಾಯಕರೆದುರು ತನಗೂ ಜನ ಬಲವಿದೆ ಎಂದು ನಕಲಿ ಕಾರ್ಯಕರ್ತರನ್ನು ತೋರ್ಪಡಿಸಿದ ಚಿಲ್ತಡ್ಕ..!!

- Advertisement -G L Acharya panikkar
- Advertisement -
vtv vitla

ವಿಟ್ಲ: ಬಿಜೆಪಿ ಮಹಾಶಕ್ತಿ ಕೇಂದ್ರದ 8ನೇ ಬೂತ್‌ನ ಅಧ್ಯಕ್ಷ ಮೋಹನ್‌ ಕಟ್ಟೆ ಕಾಂಗ್ರೇಸ್‌ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ ಎಂದು ಮೋಹನ್‌ ಕಟ್ಟೆ ಸ್ಪಷ್ಟನೆ ನೀಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದಿವ್ಯಪ್ರಭಾ ಚಿಲ್ತಡ್ಕ ಪೋಟೋ ಒಂದನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೇಜ್‌ನಲ್ಲಿ ಹರಿಬಿಟ್ಟಿದ್ದು, ವಿಟ್ಲದ ಕೆಲ ಕಿಡಿಗೇಡಿಗಳು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲೇ ಪ್ರಚಾರದ ತೆವಲಿರುವ ದಿವ್ಯಪ್ರಭಾ, ಬೆಂಗಳೂರಿನಲ್ಲಿ ಡಿಕೆ ಸಾಹೇಬರ ಜೊತೆ ತಾನು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೇಸ್‌ ಸೇರ್ಪಡೆಗೊಳಿಸಿದ್ದೇನೆ ಎಂಬ ಹೈಡ್ರಾಮಾಕ್ಕೆ ವಿಟ್ಲದ ಬಿಜೆಪಿ ನಾಯಕರನ್ನು, ಕಾರ್ಯಕರ್ತರನ್ನು ಮತ್ತು ಸಂಘಪರಿವಾರದ ನಾಯಕರನ್ನು ತೇಜೋವಧೆ ಮಾಡುವ ಷಡ್ಯಂತ್ರವಾಗಿರುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವಿಟ್ಲ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅತೀ ಹೆಚ್ಚು ಆಗಿದ್ದು ಇದನ್ನು ಸಹಿಸದ ಕೆಲ ನರಿ ಬುದ್ಧಿ ಉಳ್ಳವರು ಈ ರೀತಿ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.

- Advertisement -

Related news

error: Content is protected !!